Advertisement

ನಕ್ಸಲ್ ಅಟ್ಟಹಾಸ; ಬಾಂಬ್ ಸ್ಫೋಟಕ್ಕೆ ಯೋಧ ಹುತಾತ್ಮ, 4 ನಾಗರಿಕರು ಬಲಿ

02:22 PM Nov 08, 2018 | Team Udayavani |

ಛತ್ತೀಸ್ ಗಢ್: ಬಸ್ ಅನ್ನು ಗುರಿಯಾಗಿರಿಸಿಕೊಂಡು ಸುಧಾರಿತ ಸ್ಫೋಟಕ ಬಳಸಿ ನಕ್ಸಲೀಯರು ನಡೆಸಿದ ದಾಳಿಯಲ್ಲಿ ಮೂವರು ನಾಗರಿಕರು, ಒಬ್ಬರು ಸಿಐಎಸ್ ಎಫ್(ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ನ ಯೋಧ ಹುತಾತ್ಮರಾಗಿರುವ ಘಟನೆ ದಾಂತೇವಾಡದಲ್ಲಿ ಗುರುವಾರ ನಡೆದಿದೆ.

Advertisement

ಪಿಟಿಐ ವರದಿ ಪ್ರಕಾರ, ದಾಂತೇವಾಡದಲ್ಲಿ ವಾಹನ ಗುರಿಯಾಗಿರಿಸಿಕೊಂಡು ನಕ್ಸಲೀಯರು ನಡೆಸಿದ ಸ್ಫೋಟದಲ್ಲಿ ಒಬ್ಬರು ಯೋಧರು, ಬಸ್ ಚಾಲಕ, ಕಂಡಕ್ಟರ್, ಪ್ರಯಾಣಿಕ ಹಾಗೂ ಕ್ಲೀನರ್ ಸಾವನ್ನಪ್ಪಿರುವುದಾಗಿ ವಿವರಿಸಿದೆ. ಘಟನೆಯಲ್ಲಿ ಇಬ್ಬರು ಸಿಐಎಸ್ ಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಂತೇವಾಡ ಜಿಲ್ಲೆಯ ಗುಡ್ಡಗಾಡು ಪ್ರದೇಶವಾದ ಬಾಚೇಲಿ ಎಂಬಲ್ಲಿ ಸ್ಫೋಟ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ. ಸಿಐಎಸ್ ಎಫ್ ಯೋಧರು ದಿನನಿತ್ಯದ ಅಡುಗೆ ಸಾಮಾನು ಖರೀದಿಸಿಕೊಂಡು ಬಸ್ ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ನವೆಂಬರ್ 12 ಮತ್ತು 20ರಂದು ಒಟ್ಟು ಎರಡು ಹಂತದಲ್ಲಿ ಛತ್ತೀಸ್ ಗಢ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ವೇಳೆ ನಕ್ಸಲೀಯರ ಅಟ್ಟಹಾಸ ಮತ್ತೆ ಮುಂದುವರಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next