Advertisement

ಕಾಂಗ್ರೆಸ್‌ನಲ್ಲಿ CM ಆಗುವ ಅರ್ಹತೆ ಹಲವು ನಾಯಕರಿಗೆ ಇದೆ:ಸಿದ್ದರಾಮಯ್ಯ

10:40 AM Nov 18, 2018 | |

ಹುಬ್ಬಳ್ಳಿ: ಪಕ್ಷ ನಿರ್ಧರಿಸಿದರೆ ಮುಖ್ಯಮಂತ್ರಿಯಾಗಲು ನಾನು ಸಿದ್ದ ಎನ್ನುವ ಡಿಸಿಎಂ ಡಾ ಜಿ.ಪರಮೇಶ್ವರ್‌ ಅವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಮತ್ತು ಆಕಾಂಕ್ಷೆ  ಹಲವು ನಾಯಕರಿಗೆ ಇದೆ ಎಂದಿದ್ದಾರೆ.

Advertisement

ಭಾನುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು  ಪರಮೇಶ್ವರ್‌ ಅವರು ಅವಕಾಶ ಸಿಕ್ಕಿದ್ರೆ ಸಿಎಂ ಆಗಲು ಸಿದ್ದ ಎಂದಿದ್ದಾರೆ. ಈಗ ಮೈತ್ರಿ ಸರ್ಕಾರ ಇದೆ, ನಮಗೆ ಬಹುಮತ ಇಲ್ಲ. ಅವರು ಹೇಳಿದ್ದರಲ್ಲಿ ತಪ್ಪಿಲ್ಲ, ಕಾಂಗ್ರೆಸ್‌ನಲ್ಲಿ ಸಾಕಷ್ಟು ಹಿರಿಯರು ಮತ್ತು ಕಿರಿಯರು ಮುಖ್ಯಮಂತ್ರಿ ಆಗುವ ಕನಸು ಇಟ್ಟುಕೊಂಡಿದ್ದಾರೆ ಎಂದರು. 

ರಾಜ್ಯ ಸಚಿವ ಸಂಪುಟ ಶೀಘ್ರದಲ್ಲಿ ವಿಸ್ತರಣೆ ಆಗಲಿದೆ.ಪಂಚ ರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ  ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭೇಟಿಗೆ ಸಮಯ ಸಿಕ್ಕಿಲ್ಲ. ಅವರ ಭೇಟಿಗೆ ಸಮಯ ನಿಗದಿಯಾದ  ತಕ್ಷಣ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಅವರು ಹೇಳಿದರು.

Advertisement

ಕೇಂದ್ರದಿಂದಲೇ ಸಿಬಿಐ ದುರ್ಬಳಕೆ 
ಕೇಂದ್ರ ಸರ್ಕಾರವೇ ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ರಾಜ್ಯ ಸರ್ಕಾರವನ್ನು ಕೇಳಿ ತನಿಖೆ ಆರಂಭಿಸಬೇಕು, ಆದರೆ ಹಾಗೆ ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next