Advertisement

ಮೋದಿ ಗಂಟಲು ಸೀಳಲು ಬಿಹಾರದ ಜನ ತಯಾರಾಗಿದ್ದಾರೆ!: ರಾಬ್ರಿದೇವಿ

02:14 PM Nov 22, 2017 | Team Udayavani |

ಪಾಟ್ನಾ:ಬಿಹಾರದ ಹಲವು ಜನರು ಪ್ರಧಾನಿ ನರೇಂದ್ರ ಮೋದಿ ಅವರ ಗಂಟಲು ಸೀಳಲು ಹಾಗೂ ಕೈ ಕಡಿಯಲು ತಯಾರಾಗಿದ್ದಾರೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ.

Advertisement

ನರೇಂದ್ರ ಮೋದಿ ದೂಷಿಸುತ್ತಿರುವ ಕೈ ಬೆರಳುಗಳನ್ನು ಕತ್ತರಿಸಬೇಕಾಗಿದೆ. ಈ ದೇಶದಲ್ಲಿ ಆ ವ್ಯಕ್ತಿಯನ್ನು ಯಾರೂ ತಡೆಯುತ್ತಿಲ್ಲ. ಬಿಹಾರದ ಜನರು ಏನು ಹೇಳುವುದಿಲ್ಲ. ಆದರೆ ಬಿಹಾರದ ಹಲವು ಜನರು ಪ್ರಧಾನಿ ಮೋದಿ ಅವರ ಗಂಟಲು ಸೀಳಲು ತಯಾರಾಗಿದ್ದಾರೆ ಎಂದು ಹೇಳಿದರು.

ಮಂಗಳವಾರ ಬಿಹಾರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ರಾಬ್ರಿದೇವಿ ಈ ಹೇಳಿಕೆ ನೀಡಿದ್ದಾರೆ. ಬಿಹಾರದ ಬಿಜೆಪಿ ಅಧ್ಯಕ್ಷ, ಸಂಸದ ನಿತ್ಯಾನಂದ ರಾಯ್ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರ ವಿರುದ್ಧ ಎತ್ತುವ ಎಲ್ಲಾ ಕೈ ಬೆರಳುಗಳನ್ನು ಹಾಗೂ ಕೈಗಳನ್ನು ಮುರಿಯಬೇಕು(ಕತ್ತರಿಸಬೇಕು) ಎಂದು ಹೇಳಿಕೆ ನೀಡಿದ್ದರು.

ಆದರೆ ಬಳಿಕ ರಾಯ್ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದರು. ಬಿಹಾರ ಜನರ ಭಾವನೆಗಳಿಗೆ ಧಕ್ಕೆ ತಂದ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸುವುದಾಗಿ ಪ್ರತಿಕ್ರಿಯೆ ನೀಡಿದ್ದರು. ಇದೀಗ ನಿತ್ಯಾನಂದ ರಾಯ್ ಅವರ ಹೇಳಿಕೆಗೆ ತಿರುಗೇಟು ಎಂಬಂತೆ ರಾಬ್ರಿದೇವಿ ಈ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next