Advertisement
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲು ಸಂಪರ್ಕ ಮಾಡ್ತಾ ಇದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಮಂದಿ ರಾಜಕೀಯ ಮುತ್ಸದ್ದಿಗಳು, ಹಾಲಿ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಮಧ್ಯವರ್ತಿಗಳನ್ನ ನನ್ನ ಬಳಿ ಕಳಿಸಿ ಅಣ್ಣಾವರೇ ನಾನು ಪಾರ್ಟಿ ಸೇರಬೇಕು ಅಂತಾ ದುಂಬಾಲು ಬಿದ್ದಿದ್ದಾರೆ ಎಂದರು. ಹಾಲಿ ನಮ್ಮ ಸಂಪರ್ಕದಲ್ಲಿ ಹಲವು ನಾಯಕರು ಇದ್ದಾರೆ. ಸಮಯ ಬಂದಾಗ ನಾನು ಅವರ ಹೆಸರನ್ನು ಹೇಳುವೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುವವರ ಕುರಿತು ಈಗಾಗಲೇ ಸಿಎಂ ಸೇರಿದಂತೆ ಹಲವು ವರಿಷ್ಠರ ಗಮನಕ್ಕೆ ತಂದಿರುವೆ. ಹೈಕಮಾಂಡ್ ಗ್ರಿನ್ ಸಿಗ್ನಲ್ ಕೊಟ್ಟ ಬಳಿಕ ಎಲ್ಲರನ್ನೂ ಬಿಜೆಪಿಗೆ ಕರೆತರುವೆ ಎಂದು ಅವರು ತಿಳಿಸಿದರು.
Advertisement
ಕಾಂಗ್ರೆಸ್ನ ಹಲವು ನಾಯಕರು ಶೀಘ್ರ ಬಿಜೆಪಿಗೆ
03:04 PM May 11, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.