Advertisement

ದಲಿತರಿಂದ ಮನುಸ್ಮೃತಿ ಕೃತಿ ದಹನ-ಅಣುಕು ಶವಯಾತ್ರೆ

11:26 AM Dec 26, 2021 | Team Udayavani |

ವಾಡಿ: ಡಾ| ಬಿ.ಆರ್‌.ಅಂಬೇಡ್ಕರ್‌ ಮನುಸ್ಮೃತಿ ದಹಿಸಿದ ದಿನವನ್ನು ಪಟ್ಟಣದಲ್ಲಿ ದಲಿತರು ಮನುಸ್ಮೃತಿ ದಹಿಸುವ ಮೂಲಕ ಸ್ಮರಿಸಿಕೊಂಡರು.

Advertisement

ಇಲ್ಲಿನ ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ ದಲಿತ ಸಮುದಾಯದ ಕಾರ್ಯಕರ್ತರು, ಜಾತಿ ಪೋಷಕ ಮನುಸ್ಮೃತಿ ಮಾನವನ ವಿರೋಧಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೌದ್ಧ ಸಮಾಜದ ಸಹ ಕಾರ್ಯದರ್ಶಿ ಸೂರ್ಯಕಾಂತ ರದ್ದೇವಾಡಿ ಮನುಸ್ಮೃತಿ ಪ್ರತಿಗಳಿಗೆ ಬೆಂಕಿ ಹಚ್ಚಿದರು. ಮುಖಂಡರಾದ ಯಶ್ವಂತ ಧನ್ನೇಕರ, ಗೌತಮ ಕಟ್ಟಿ, ಗುರುಪಾದ ದೊಡ್ಡಮನಿ, ಚಂದ್ರಶೇಖರ ಧನ್ನೇಕರ, ಪ್ರಕಾಶ ಹುಣಚಡಗಿ, ರಘು ಭಟ್ಟರ್ಕಿ, ಷಣ್ಮುಖ ಮತ್ತಿತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next