Advertisement

ಪ್ರಸಕ್ತ ವರ್ಷದ ಮುಂಗಾರು ಸ್ವಲ್ಪ ವಿಳಂಬ?

01:07 AM May 31, 2021 | Team Udayavani |

ಹೊಸದಿಲ್ಲಿ : ಪ್ರಸಕ್ತ ವರ್ಷದ ಮುಂಗಾರು ಜೂ. 3ರಂದು ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಮಹಾನಿರ್ದೇಶಕ ಎಂ. ಮೊಹಾಪಾತ್ರಾ ಹೇಳಿದ್ದಾರೆ.

Advertisement

ಕರ್ನಾಟಕ ಕರಾವಳಿಯಾಚೆ ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಪರಿಸ್ಥಿತಿ ಇದೆ. ಇದರಿಂದ ಮಳೆಯ ಮಾರುತಗಳು ಪ್ರಬಲಗೊಳ್ಳಲು ವಿಳಂಬವಾಗುತ್ತಿದೆ. ಮುಂಗಾರು ಜೂ. 1ರ ಬಳಿಕ ನಿಧಾನವಾಗಿ ಕೇರಳಕ್ಕೆ ಪ್ರವೇಶ ಪಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಮೇ 31ಕ್ಕೆ ಮುಂಗಾರು ಮಾರುತ ಕೇರಳ ಪ್ರವೇಶಿಸಲಿದೆ ಎಂದು ಐಎಂಡಿ ಹೇಳಿತ್ತು. ಈ ಮಧ್ಯೆ, ಈಗಾಗಲೇ ಮುಂಗಾರು ಮಾರುತ ಕೇರಳ ಪ್ರವೇಶಿಸಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಪ್ರತಿಪಾದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next