Advertisement

ಜೂನ್‌ 25 ಕರಾಳ ದಿನ ,ಭಾರತೀಯರು ಅದನ್ನು ಮರೆಯಲು ಸಾಧ್ಯವಿಲ್ಲ: ಮೋದಿ

04:10 PM Jun 25, 2017 | |

 ಹೊಸದಿಲ್ಲಿ: ಜೂನ್‌ 25 ಭಾರತೀಯರ ಪಾಲಿಗೆ ಕರಾಳ ದಿನವಾಗಿದ್ದು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳ್ಳವರು ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 42 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯನ್ನು ನೆನೆಪಿಸಿದ್ದಾರೆ.

Advertisement

ಅಮೆರಿಕ ಪ್ರವಾಸದಲ್ಲಿದ್ದರೂ ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನಲ್ಲಿ ದೇಶವಾಸಿಗಳನ್ನುದ್ದೇಶಿಸಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

1975 ರ ಜೂನ್‌ 25 ರಂದು ಹೇರಲಾದ ತುರ್ತು ಪರಿಸ್ಥಿತಿಯನ್ನು ದೇಶಭಕ್ತ ಭಾರತೀಯರು ಯಾರೂ ಮರೆಯಲು ಸಾಧ್ಯವಿಲ್ಲ. ಇಡೀ ರಾಷ್ಟ್ರವನ್ನು  ಸೆರೆಮನೆಯಲ್ಲಿಟ್ಟಂತಾಗಿತ್ತು.ಆ ವೇಳೆ ಮಾಧ್ಯಮಗಳು ನಿಷ್ಪರಿಣಾಮಕಾರಿಯಾಗಿದ್ದವು. ಆ ದಿನಗಳಲ್ಲಿ ಹೋರಾಟದ ಮೂಲಕ ದೇಶದ ಪ್ರತೀಯೊಬ್ಬ ನಾಯಕರು ರಾಷ್ಟ್ರೀಯತೆಯನ್ನು ಸಾಬೀತು ಮಾಡಿದ್ದರು ಎಂದರು.

 ಗುಜರಾತ್ ನಲ್ಲಿ ನಾನು ಹೂಗುಚ್ಛದ ಬದಲಾಗಿ ಪುಸ್ತಕಗಳು ಮತ್ತು  ಕರವಸ್ತ್ರಗಳನ್ನು ನೀಡುವ ಮೂಲಕ ಹೊಸ ಸಂಪ್ರದಾಯವನ್ನು ಸೃಷ್ಟಿ ಮಾಡಿದ್ದೆ. ಜನರು ಹೂಗುಚ್ಛಗಳ ಬದಲಾಗಿ ಪುಸ್ತಕಗಳನ್ನು ನೀಡುವ ಸಂಪ್ರದಾಯವನ್ನು ಅಳವಡಿಸಿಕೊಳ್ಳಲು ಮತ್ತು ಖಾದಿ ಬಳಸಲು ಕರೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next