Advertisement

ಆರ್‌ಬಿಐ ಗವರ್ನರನ್ನು ರಕ್ಷಿಸಿದ ಮನಮೋಹನ್‌

08:12 AM Jan 19, 2017 | Harsha Rao |

ಕಾಂಗ್ರೆಸ್‌ನ ಸದಸ್ಯರು ಆರ್‌ಬಿಐ ಮುಖ್ಯಸ್ಥ ಊರ್ಜಿತ್‌ ಪಟೇಲ್‌ ಅವರಿಗೆ ಹಲವಾರು ಕಠಿನ ಪ್ರಶ್ನೆಗಳನ್ನೇ ಕೇಳಿದರು. ಅದರಲ್ಲೂ ದಿಗ್ವಿಜಯ್‌ ಸಿಂಗ್‌ ಅವರಂತೂ, “ಕ್ಯಾಶ್‌ ವಿತ್‌ಡ್ರಾವಲ್‌ ಮೇಲೆ ಹೇರಲಾಗಿರುವ ಮಿತಿಯನ್ನು ವಾಪಸ್‌ ತೆಗೆದುಕೊಂಡರೆ ದೇಶದಲ್ಲಿ ದೊಂಬಿ ಉಂಟಾಗುತ್ತದೆಯೇ’ ಎಂಬ ಪ್ರಶ್ನೆ ಕೇಳಿದರು. ಈ ಕೂಡಲೇ ಆರ್‌ಬಿಐ ಮುಖ್ಯಸ್ಥರ ನೆರವಿಗೆ ಬಂದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, “ಆರ್‌ಬಿಐನ ಹಿತಕ್ಕೆ ಧಕ್ಕೆಯುಂಟು ಮಾಡುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಬೇಡಿ’ ಎಂದು ಹೇಳಿದರು. ಸದಸ್ಯರ ಇನ್ನೂ ಹಲವು ಅಸಂಬದ್ಧ ಪ್ರಶ್ನೆಗಳಿಗೆ ಉತ್ತರಿಸಬೇಡಿ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next