Advertisement

ಕಾಮಗಾರಿ ವೀಕ್ಷಿಸಿದ ಶಾಸಕ ಮಂಜುನಾಥ್‌

03:09 PM Oct 05, 2020 | Suhan S |

ಮಾಗಡಿ: ಸುಮಾರು 33 ಕೋಟಿ ರೂ. ವೆಚ್ಚದಲ್ಲಿ 28 ಕಿ.ಮೀ ರಸ್ತೆ ಅಗಲಿಕರಣ ಕಾಮಗಾರಿ ಗುಣ ಮಟ್ಟವನ್ನು ಶಾಸಕ ಎ.ಮಂಜುನಾಥ್‌ ವೀಕ್ಷಣೆ ಮಾಡಿದರು.

Advertisement

ಈ ವೇಳೆ ಮಾತನಾಡಿದ ಶಾಸಕರು, ತಾಲೂಕಿನ ಸುಗ್ಗನಹಳ್ಳಿ, ಕುದೂರು ಮಾರ್ಗವಾಗಿ ಮರೂರು, ಕಾಳಾರಿ ಮೂಲಕ ಆಗಲಕೋಟೆ, ಕೊಟ್ಟಗಾರಹಳ್ಳಿ ವರೆಗೆ ಸುಮಾರು 33 ಕೋಟಿ ರೂ. ವೆಚ್ಚದಲ್ಲಿ 28 ಕಿ.ಮೀ ರಸ್ತೆ ಅಗಲಿಕರಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಅದರ ಗುಣಮಟ್ಟ ಪರಿಶೀಲಿಸಲು ವೀಕ್ಷಣೆಗೆ ಭೇಟಿ ನೀಡಿದ್ದೇನೆ. ಬಹುತೇಕ ಕಡೆಗೆ ಈಗಾಗಲೇ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ.ಲೋಕೋಪಯೋಗಿ ಇಲಾಖೆಯವತಿಯಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಕಾಮ ಗಾರಿ ನಡೆಯುತ್ತಿದೆ. ರೈತರಿಗೆ ಸಮಸೆ¾ಗಳಾಗದಂತೆ ಕಾಮಗಾರಿ ನಡೆಸಬೇಕೆಂದು ಈಗಾಗಲೇ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ ಎಂದರು.

ರಾಮನಗರಜಿಲ್ಲಾಕೂಟಗಲ್‌ ಜಿಲ್ಲಾ ಪಂಚಾಯ್ತಿ ಜಾಲಮಂಗಲದ ಕೊಟ್ಟಗಾರಹಳ್ಳಿ ವರೆಗೆ ಮೊದಲ ಪ್ಯಾಕೇಜ್‌ ಮುಗಿದಿದೆ. ಕೊಟ್ಟಗಾರಹಳ್ಳಿ, ಆಗಲ ಕೋಟೆ ಮಾರ್ಗವಾಗಿ ಕಾಳಾರಿ ರಸ್ತೆ ಮೂಲಕ ಕುದೂರಿನ ಸುಗ್ಗನಹಳ್ಳಿ ವರೆಗೂ ರಸ್ತೆ ಅಗಲಿಕರಣ ಮಾಡುವ ಮೂಲಕ2 ಪಥದ ರಸ್ತೆ ಡಾಂಬರೀಕರಣ ಮಾಡಲು ಅಗತ್ಯಕ್ರಮಕೈಗೊಳ್ಳಲಾಗಿದೆ ಎಂದರು. ರಸ್ತೆ ಬದಿಯಲ್ಲಿರುವ ಗ್ರಾಮೀಣ ಜನರು ರಸ್ತೆ ಅಗಲಿಕರಣ, ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣಕ್ಕೆ ಸಹಕಾರ ನೀಡಬೇಕು. ರೈತರು ಸಂಚರಿ ಸುವ ಜಾಗದ ಚರಂಡಿ ಮೇಲೆ ಕಾಂಕ್ರೀಟ್‌ ಹಾಕಲಾಗುವುದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಲಿದ್ದು, 3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  ಮಾಜಿ ಎಎಂ ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದ ಸಮ್ಮಿಶ್ರ ಸರ್ಕಾರದ ಅವಧಿ ಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಎಚ್‌.ಡಿ.ರೇವಣ್ಣ 300 ಕೋಟಿ ರೂ. ಮಂಜೂರಾತಿ ನೀಡಿದ್ದರು ಎಂದು ವಿವರಿಸಿದರು.

ಕುದೂರು ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ, ತಾಪಂ ಸದಸ್ಯಎಂ.ಜಿ.ನರಸಿಂಹಮೂರ್ತಿ,ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಕೆ.ಕೃಷ್ಣಮೂರ್ತಿ, ಸಾತನೂರು ಗ್ರಾಪಂ ಅಧ್ಯಕ್ಷ ಡಿ.ಸಿ.ಮೂರ್ತಿ, ಜುಟ್ಟನಹಳ್ಳಿ ಜಯ ರಾಮು ಎಪಿಎಂಸಿ ನಿರ್ದೇಶಕಕೆ.ಟಿ.ಮಂಜುನಾಥ್‌, ಮಾಜಿ ನಿರ್ದೇಶಕ ಜೈಕುಮಾರ್‌, ರಂಗಸ್ವಾಮಿ, ತಮ್ಮಣ್ಣಗೌಡ, ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next