Advertisement

ಹೊಸಬರೊಂದಿಗೆ ಮಂಜು ಸ್ವರಾಜ್‌

11:15 AM Jul 03, 2018 | |

ಶಿವರಾಜಕುಮಾರ್‌ ಅಭಿನಯದ “ಶ್ರೀಕಂಠ’ ಹಾಗೂ ಗಣೇಶ್‌ ಅಭಿನಯದ “ಪಟಾಕಿ’ ಚಿತ್ರಗಳು ಬಿಡುಗಡೆಯಾದ ನಂತರ ನಿರ್ದೇಶಕ ಮಂಜು ಸ್ವರಾಜ್‌ ಇನ್ನೆರೆಡು ಚಿತ್ರಗಳನ್ನು ನಿರ್ದೇಶಿಸುತ್ತಾರೆ ಎಂದು ಹೇಳಲಾಗಿತ್ತು. ಒಂದು ಶರಣ್‌ ಅಭಿನಯದ ಚಿತ್ರವಾದರೆ, ಇನ್ನೊಂದು ಮಿತ್ರ ಅಭಿನಯದ “ಸಣ್ಣಕ್ಕಿ ರಾಮೇಗೌಡ’ ಚಿತ್ರಗಳನ್ನು ನಿರ್ದೇಶಿಸುತ್ತಾರೆ ಎಂದು ಸುದ್ದಿಯಾಗಿತ್ತು.

Advertisement

ಆದರೆ, ಮಂಜು ಕಾರಣಾಂತರಗಳಿಂದ ಆ ಎರಡೂ ಚಿತ್ರವನ್ನು ಬಿಟ್ಟು, ಈಗ ಮೂರನೆಯ ಚಿತ್ರಕ್ಕೆ ಕೈಹಾಕಿದ್ದಾರೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನಕ್ಕೆ ಅಣಿಯಾಗಿರುವ ಮಂಜುಸ್ವರಾಜ್‌, ಈ ಬಾರಿ ಹೊಸಬರ ಮೊರೆ ಹೋಗಿದ್ದಾರೆ. ವಿಶೇಷವೆಂದರೆ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ “ಟೆಂಟ್‌ ಸಿನಿಮಾ’ ಶಾಲೆ ವಿದ್ಯಾರ್ಥಿಗಳು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಕಳೆದ 2017 ರ ಬ್ಯಾಚ್‌ ವಿದ್ಯಾರ್ಥಿಗಳಾದ ಅನುರಾಗ್‌, ನೌಷಾದ್‌, ರವಿತೇಜ ಮತ್ತು ಪ್ರಜ್ವಲ್‌ ಚಿತ್ರದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗಣಪ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ಸತ್ಯಭಾಮ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹೊಸ ಚಿತ್ರಕ್ಕೆ ಆಗಸ್ಟ್‌ 15 ರಂದು ಚಾಲನೆ ಸಿಗಲಿದೆ. 

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಎರಡು ಹಾಡುಗಳಿಗೆ ಅಭಿಮಾನ್‌ ರಾಯ್‌ ಸಂಗೀತ ನೀಡುತ್ತಿದ್ದಾರೆ. ಸುರೇಶ್‌ ಬಾಬು ಅವರ ಛಾಯಾಗ್ರಹಣವಿದೆ. ಸುಮಾರು 40 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಇದು ಸಿನಿಮಾದೊಳಗೊಂದು ಸಿನಿಮಾ ಕಥೆ ಹೊಂದಿರುವ ಚಿತ್ರ. ಇಷ್ಟರಲ್ಲೇ ಉಳಿದ ತಾರಾಗಣದ ಆಯ್ಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next