Advertisement

ಮಂಜೇಶ್ವರ ವಿಧಾನ ಸಭಾ ಕ್ಷೇತ್ರ: ರವೀಶ ತಂತ್ರಿ ಮತಯಾಚನೆ

12:04 AM Mar 30, 2019 | sudhir |

ಕುಂಬಳೆ: ಕಾಸರಗೋಡು ಲೋಕಸಭಾ ಎನ್‌.ಡಿ.ಎ.ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರು ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ವಿವಿಧೆೆಡೆಗಳಲ್ಲಿ ಸಂಚರಿಸಿ ಮತದಾರರಲ್ಲಿ ಮತ ಯಾಚಿಸಿದರು.

Advertisement

ಬೆಳಗ್ಗೆ ಪೆರ್ಲದಲ್ಲಿ ಹಿರಿಯ ಬಿ.ಜೆ.ಪಿ. ನಾಯಕ ಟಿ.ಆರ್‌.ಕೆ. ಭಟ್‌ ಅವರ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದರು. ಬಳಿಕ ಪೇಟೆಯಲ್ಲಿ ಮತಯಾಚಿಸಿದರು. ಕಾರ್ಯಕರ್ತರು ಬ್ಯಾಂಡ್‌ ವಾದ್ಯಘೋಷ‌ಗಳೊಂದಿಗೆ ಅಭ್ಯರ್ಥಿಯನ್ನು ಸ್ವಾಗತಿಸಿದರು. ಮಾತೆಯರು ಆರತಿ ಬೆಳಗಿ ತಿಲಕವಿಟ್ಟು ಗೌರವ ಸಲ್ಲಿಸಿದರು.

ಬಳಿಕ ಸೀತಾಂಗೋಳಿ, ಬಾಡೂರು, ಪೆರ್ಮುದೆ, ಪೈವಳಿಕೆ, ಬಾಯಾರು, ಮುಳಿಗದ್ದೆ, ಮೀಂಜ, ಮಜಿರ್ಪಳ್ಳ, ವರ್ಕಾಡಿ, ಉಪ್ಪಳ, ಹೊಸಂಗಡಿ, ಮಂಜೇಶ್ವರ ಮೊದಲಾದೆಡೆಗಳಲ್ಲಿ ಸಂಚರಿಸಿ ಮತಬೇಟೆ ನಡೆಸಿದರು.
ಅಭ್ಯರ್ಥಿಯೊಂದಿಗೆ ಪಕ್ಷದ ಬಿ.ಜೆ.ಪಿ. ನಾಯಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ಅರಿಬೈಲು ಗೋಪಾಲ ಶೆಟ್ಟಿ, ಹರಿಶ್ಚಂದ್ರ ಮಂಜೇಶ್ವರ, ಎಚ್‌. ಸತ್ಯಶಂಕರ ಭಟ್‌, ಪುಷ್ಪಾ ಅಮೆಕ್ಕಳ, ರೂಪವಾಣಿ ಭಟ್‌, ಶಂ.ನಾ. ಖಂಡಿಗೆ, ಸುಮಿತ್‌ರಾಜ್‌, ಸರೋಜಾ ಆರ್‌.ಬಲ್ಲಾಳ್‌, ಸವಿತಾ ಬಾಳಿಕೆ, ಜಯಂತಿ ಶೆಟ್ಟಿ, ಪದ್ಮನಾಭ ಕಡಪ್ಪುರ, ಮುರಳೀಧರ ಯಾದವ್‌, ಆದರ್ಶ್‌ ಬಿ.ಎಂ., ಯಾದವ ಬಡಾಜೆ, ಸದಾಶಿವ ಚೇರಾಲ್‌, ಹರೀಶ್‌ ಬೊಟ್ಟಾರಿ, ಸುಬ್ರಹ್ಮಣ್ಯ ಭಟ್‌, ನವೀನ್‌ ಬಡಾಜೆ, ಬಳ್ಳಂಬೆಟ್ಟು ಸಂಕಪ್ಪ ಭಂಡಾರಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next