Advertisement

ಮಂಜರಪಲ್ಕೆಗೆ ಬೇಕು ಸುಸಜ್ಜಿತ ಬಸ್‌ ತಂಗುದಾಣ

12:38 AM Aug 07, 2019 | Team Udayavani |

ಬೆಳ್ಮಣ್‌: ಕೆದಿಂಜೆ ಮಂಜರ ಪಲ್ಕೆಯಲ್ಲಿ ಬಸ್‌ ನಿಲ್ದಾಣ ಇಲ್ಲದೆ ಇರುವುದರಿಂದ ಬೋಳ, ಕಾಂತಾವರ, ಬೇಲಾಡಿ, ಕೆಮ್ಮಣ್ಣು, ವಂಜಾರಕಟ್ಟೆ ಕಡೆಗೆ ಪ್ರಯಾಣಿಸುವವರು ಮಳೆ, ಬಿಸಿಲಿಗೆ ನಿಲ್ಲಲು ಸರಿಯಾದ ಜಾಗ ವಿಲ್ಲದೆ ಪರದಾಡುವಂತಾಗಿದೆ.

Advertisement

ಈ ಹಿಂದೆ ಬೋಳ ಕಡೆಗೆ ಪ್ರಯಾಣಿ ಸುವ ಪ್ರಯಾಣಿಕರಿಗೆ ಆಸರೆಯಾಗಿದ್ದ ಬಸ್‌ ತಂಗುದಾಣವನ್ನು ಹೆದ್ದಾರಿ ವಿಸ್ತರಣೆ ಸಂದರ್ಭ ಕೆಡವಲಾಗಿತ್ತು. ಇದರ ವಿರುದ್ಧ ದಿಕ್ಕಿನಲ್ಲಿ ಕಾರ್ಕಳ ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ಬಸ್‌ ತಂಗುದಾಣವನ್ನು ಹೆದ್ದಾರಿ ಕಾಮಗಾರಿ ನಡೆಸಿದ ಆರ್‌.ಎನ್‌.ಎಸ್‌. ಸಂಸ್ಥೆ ನಿರ್ಮಿಸಿತ್ತು. ಆದರೆ ಈ ವರೆಗೆ ಕೆಡವಿದ ಬಸ್‌ ತಂಗುದಾಣವನ್ನು ಮರು ನಿರ್ಮಾಣ ಮಾಡದಿರುವುದರಿಂದ ಪ್ರಯಾಣಿಕರಿಗೆ ಅಂಗಡಿ, ಬೇಕರಿ ಹಾಗೂ ಗೂಡಂಗಡಿಗಳೇ ಆಸರೆಯಾಗಿವೆ.

ಶಾಲಾ ಮಕ್ಕಳು, ವೃದ್ಧರಿಗೆ ತೊಂದರೆ

ಬೋಳ, ವಂಜಾರಕಟ್ಟೆ, ಬೇಲಾಡಿ, ಕಾಂತಾವರ ಕಡೆಗಳಿಂದ ಕಾರ್ಕಳ ಹಾಗೂ ಬೆಳ್ಮಣ್‌ ಭಾಗದ ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ವೃದ್ಧರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ನಂದಳಿಕೆ ಗ್ರಾ.ಪಂ. ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಗಣ್ಯರಿಗೆ ಒತ್ತಡ ಹೇರಿದ್ದು ಸಕಾಲಿಕ ಸ್ಪಂದನೆಗೆ ಕಾಯುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಜಾಗದ ಸಮಸ್ಯೆ

Advertisement

ಈ ಹಿಂದೆ ಬಸ್‌ ತಂಗುದಾಣ ಇದ್ದ ಜಾಗದಲ್ಲಿ ಹೊಸ ತಂಗುದಾಣ ನಿರ್ಮಿ ಸಲು ಜಾಗದ ಸಮಸ್ಯೆ ಇರುವುದರಿಂದ ತೊಡಕಾಗಿದೆ. ಈ ಬಗ್ಗೆಯೂ ಗಮನ ಹರಿಸಿ ಹೊಸ ಬಸ್‌ ತಂಗುದಾಣ ನಿರ್ಮಿಸ ಬೇಕೆಂಬುದು ಸ್ಥಳೀಯರ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next