Advertisement

ವರಿಷ್ಠರ ವಿರುದ್ಧ ಟೀಕೆ ಈಗ ಸಂಸದ ಮನೀಶ್‌ ಸರದಿ

01:44 AM Dec 24, 2021 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ವರಿಷ್ಠರ ವಿರುದ್ಧ ಹಿರಿಯ ನಾಯಕ ಹರೀಶ್‌ ರಾವತ್‌ ತಿರುಗಿ ಬಿದ್ದಿರುವಂತೆಯೇ ಕೇಂದ್ರದ ಮಾಜಿ ಸಚಿವ ಮನೀಶ್‌ ತಿವಾರಿ ಕೂಡ ಗುರುವಾರ ಟ್ವೀಟ್‌ ಪ್ರಹಾರ ಮಾಡಿದ್ದಾರೆ.

Advertisement

ಪಕ್ಷದ ವರಿಷ್ಠರು ಸೂಕ್ತವಾಗಿ ಪರಿಸ್ಥಿತಿಯನ್ನು ನಿಭಾಯಿ­ಸ­ದ್ದ­ರಿಂದಲೇ ಉತ್ತರಾಖಂಡ ಪ್ರದೇಶ ಕಾಂಗ್ರೆಸ್‌ ಸಮಿತಿಯಲ್ಲಿ ಬಿಕ್ಕಟ್ಟು ಉಂಟಾಗಿದೆ ಎಂದು ದೂರಿದ್ದಾರೆ.

“ಮೊದಲು ಅಸ್ಸಾಂ, ಅನಂತರ ಪಂಜಾಬ್‌, ಈಗ ಉತ್ತರಾಖಂಡ’ ಎಂದು ಬರೆದುಕೊಂಡಿದ್ದಾರೆ. ಈ ನಡುವೆ, ಮಾಜಿ ಸಿಎಂ ಹರೀಶ್‌ ರಾವತ್‌ ಟ್ವೀಟ್‌ನಿಂದ ಕಂಗೆಟ್ಟಿರುವ ಕಾಂಗ್ರೆಸ್‌ ವರಿಷ್ಠರು ಅವರ ಜತೆಗೆ ಮಾತುಕತೆ ನಡೆಸಿ, ಮುನಿಸಿನ ಕಾರಣ ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ:ಮಣಿಪುರಕ್ಕೆ ಮಯನ್ಮಾರ್‌ ಉಗ್ರರಿಂದ ದಾಳಿ? ಕೇಂದ್ರ ಗುಪ್ತಚರ ಇಲಾಖೆಯ ಮುನ್ನೆಚ್ಚರಿಕೆ

ಈ ನಡುವೆ ಶುಕ್ರವಾರ ಹರೀಶ್‌ ರಾವತ್‌ ಹೊಸದಿಲ್ಲಿಗೆ ತೆರಳಲಿದ್ದು, ಚುನಾವಣೆಗೆ ಸಂಬಂಧಿಸಿದ ಪಕ್ಷದ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next