Advertisement

ಮಣಿಪುರ: ಮನೆಯೊಳಗೆ ಅಕ್ರಮ ಪ್ರವೇಶಿಸಿ ದಾಂಧಲೆ; ದೂರು

09:00 PM Jul 14, 2023 | Team Udayavani |

ಕಾಪು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯೊಳಗೆ ಪ್ರವೇಶಿಸಿದ ತಂಡವೊಂದು ಸಾಮಗ್ರಿಗಳನ್ನು ಪುಡಿಗೈದಿರುವ ಘಟನೆ ಕಾಪು ತಾಲೂಕಿನ ಮಣಿಪುರದಲ್ಲಿ ಜು. 13ರಂದು ನಡೆದಿದೆ.

Advertisement

ಮಣಿಪುರದ ರಂಜಿತ್‌ ಕುಮಾರ್‌ ಶೆಟ್ಟಿ ಅವರು ತಮಗೆ ಸೇರಿದ ಮಣಿಪುರ ಗ್ರಾಮದ ಸ್ಥಿರಾಸ್ಥಿಯಲ್ಲಿ ಆದಮ್‌ ಕ್ಲಿಫಾಮ್‌ ಎಂಬವರಿಗೆ 2012ರಲ್ಲಿ ವಾಸ್ತವ್ಯವಿರಲು ಲೀಸ್‌ ಡೀಡ್‌ ಮೂಲಕ ಜೀವನ ಪರ್ಯಂತ ಮಾತ್ರ ಇರಲು ಕರಾರು ಮಾಡಿಕೊಂಡಿದ್ದರು.

ಆದಮ್‌ ಕ್ಲಿಫಾಮ್‌ ಅವರು ಕೆಲವು ಸಮಯದ ಹಿಂದೆ ಮೃತಪಟ್ಟಿದ್ದು ಜು. 12ರಂದು ಈ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಮಂಗಳೂರಿನ ನವೀನ್‌, ಮಣಿಪುರದ ಪ್ರೀಧಾ ಲವೀನಾ ಮೊಂಥೆರೋ ಹಾಗೂ ಇತರ 3 ಜನರು ಮನೆಯ ಬಾಗಿಲನ್ನು ಒಡೆದು, ಅಲ್ಲಿದ್ದ ರಂಜಿತ್‌ ಅವರನ್ನು ದೂಡಿ ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಈ ವೇಳೆ ಅವರು ಜೋರಾಗಿ ಬೊಬ್ಬೆ ಹಾಕಿದ್ದು ಮನೆಯ ಎದುರಿನ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಗಳು ಮನೆಯ ಬಳಿ ಬಂದಿದ್ದನ್ನು ನೋಡಿ ಕಾರಿನಲ್ಲಿ ಪರಾರಿಯಾಗಿದ್ದರು.

ಎರಡನೇ ಬಾರಿ ದಾಳಿ
ರಂಜಿತ್‌ ಕುಮಾರ್‌ ಶೆಟ್ಟಿ ಅವರು ಜು. 13ರಂದು ವೈಯಕ್ತಿಕ ಕೆಲಸದ ನಿಮಿತ್ತ ಹೊರಗೆ ಹೋಗಿದ್ದು ವಾಪಸು ಮನೆಗೆ ಬಂದು ನೋಡಿದಾಗ ಮನೆಯ ಗೇಟಿನ ಬೀಗವನ್ನು ಒಡೆದು, ಮನೆಯ ಮುಂದಿನ ಮತ್ತು ಹಿಂದಿನ ಬಾಗಿಲಿನ ಬೀಗವನ್ನು ಒಡೆದಿರುವುದು ಕಂಡುಬಂದಿತ್ತು.

ಮಂಗಳೂರಿನ ನವೀನ್‌, ಮಣಿಪುರದ ಪ್ರೀಧಾ ಲವೀನಾ ಮೊಂಥೆರೋ ಹಾಗೂ 3 ಮಂದಿಯೇ ಈ ಕೃತ್ಯ ನಡೆಸಿರುವ ಬಗ್ಗೆ ಅನುಮಾನವಿದೆ ಎಂದು ಕಾಪು ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next