Advertisement

ಮಣಿಪಾಲ ವಿವಿ: ವಿಶ್ವ ಪರಿಸರ ದಿನಾಚರಣೆ

07:56 PM Jun 04, 2019 | sudhir |

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ “ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ ಮಂಗಳವಾರ ಮಣಿಪಾಲ ವಿವಿ ಆವರಣದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಜಾಥಾಕ್ಕೆ ಮಾಹೆಯ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಚಾಲನೆ ನೀಡಿದರು.

Advertisement

ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಹಾಗೂ ಡಾ| ಟಿ.ಎಂ.ಎ.
ಪೈ ಫೌಂಡೇಶನ್‌ಗೆ ಸೇರಿದ ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಮಣಿಪಾಲ ವಿವಿ ಆವರಣದಲ್ಲಿ ಗಿಡ ನೆಟ್ಟರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆಯ ಕುರಿತು ತಜ್ಞರಿಂದ ಅರಿವು ಮೂಡಿಸಲಾಯಿತು.

ಡಾ| ಟಿ.ಎಂ.ಎ, ಪೈ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಸಂಜನಾ ಪರಿಸರ ಸಂರಕ್ಷಣೆ ಕುರಿತು ಸಂದೇಶ ನೀಡಿದರು. ವೈಸ್‌ ಚಾನ್ಸಲರ್‌ ಪ್ರೊ| ಡಾ| ಪೂರ್ಣಿಮಾ ಬಾಳಿಗಾ ಮತ್ತಿತರರು ಉಪಸ್ಥಿತರಿದ್ದರು. ಕುಲಸಚಿವ ಡಾ| ನಾರಾಯಣ ಸಭಾಹಿತ್‌ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಾಪಾಲನ ಅಧಿಕಾರಿ ಡಾ| ಗೀತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next