Advertisement

ಮಣಿಪಾಲ: ಇನ್ನೂ ಪತ್ತೆಯಾಗದ ಚಿರತೆ-ಸ್ಥಳೀಯರಲ್ಲಿ ಆತಂಕ

02:57 PM Jul 29, 2024 | Team Udayavani |

ಮಣಿಪಾಲ: ಮಣಿಪಾಲ- ಕೊಳಲಗಿರಿ ಮಾರ್ಗ ಮಧ್ಯೆ ಇರುವ ಮನೆಯೊಂದರ ಕಾಂಪೌಂಡ್‌ ಒಳಗೆ ಶುಕ್ರವಾರ ತಡರಾತ್ರಿ ಚಿರತೆ ಕಂಡುಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಶನಿವಾರ ಎರಡು ಕೆಮರಾಗಳನ್ನು ಅಳವಡಿಸಿದ್ದು, ಅದನ್ನು ರವಿವಾರ
ಪರಿಶೀಲಿಸಿದಾಗ ಚಿರತೆಯ ಚಲನವಲನಗಳು ಪತ್ತೆಯಾಗಿಲ್ಲ. ಇನ್ನೂ ಒಂದೆರಡು ದಿನ ಕೆಮರಾ ಇಲ್ಲಿಯೇ ಇರಲಿದೆ. ಚಿರತೆ ಮತ್ತೆ ಆಗಮಿಸಿದರೆ ಬೋನು ಇರಿಸಲಾಗುವುದು ಎಂದು ಅರಣ್ಯ ಇಲಾಖೆ ಸಿಬಂದಿ ತಿಳಿಸಿದ್ದಾರೆ.

Advertisement

ಮನೆಯ ಕೆಮರಾದಲ್ಲೂ ಶನಿವಾರ ಚಿರತೆ ಆಗಮಿಸಿದ ಕುರುಹು ಲಭ್ಯವಾಗಿಲ್ಲ ಎಂದು ಮನೆಯ ಮಾಲಕಿ ತಿಳಿಸಿದ್ದಾರೆ. ಚಿರತೆ ಕಂಡು ಬಂದ ಹಿನ್ನೆಲೆಯಲ್ಲಿ ಭೀತಿಗೊಂಡಿರುವ ಸ್ಥಳೀಯರು ಶನಿವಾರ ರಾತ್ರಿ 7ರೊಳಗೆ ಬಾಗಿಲು ಬಂದ್‌ ಮಾಡಿ ಒಳಗೆ ಸೇರಿದ್ದರು. ಕೆಲಸಕಾರ್ಯ ನಿಮಿತ್ತ ಹೊರಹೋದವರು ಎಂದಿನಂತೆ ಮನೆಗೆ ಹೋದರು.

ಇದನ್ನೂ ಓದಿ:Mangaluru; ಲೇಡಿಹಿಲ್- ಕೆಪಿಟಿ ಬಳಿ ಅನಧಿಕೃತ ಗೂಡಂಗಡಿಗಳ ತೆರವು

Advertisement

Udayavani is now on Telegram. Click here to join our channel and stay updated with the latest news.

Next