Advertisement

Manipal: ಚಿರತೆಗಾಗಿ ಶೋಧ ಕಾರ್ಯ ಮುಂದುವರಿಕೆ

10:02 PM Aug 04, 2024 | Team Udayavani |

ಮಣಿಪಾಲ: ಹಲವು ದಿನಗಳಿಂದ ಮಣಿಪಾಲ ಸುತ್ತಮುತ್ತಲು ಆತಂಕ ಮೂಡಿಸಿದ್ದ ಚಿರತೆಯ ಚಲನವಲನ ಇತ್ತೀಚೆಗೆ ಪತ್ತೆಯಾಗಿಲ್ಲ. ಇಲಾಖೆ ವತಿಯಿಂದ ಗಸ್ತು ವೀಕ್ಷಣೆಯಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಇಲಾಖೆ ಸಿಬಂದಿ ತಿಳಿಸಿದ್ದಾರೆ.

Advertisement

ಕೆಲವು ದಿನಗಳ ಹಿಂದೆ ಪೆರಂಪಳ್ಳಿಯ ಮನೆ ಬಳಿ ಚಿರತೆ ಪತ್ತೆಯಾಗಿರುವ ಬಗ್ಗೆ ಸಿಸಿಟಿವಿಯಲ್ಲಿ ದೃಶ್ಯ ದಾಖಲಾಗಿತ್ತು. ಅನಂತರ ಮಣಿಪಾಲದ ಇತರೆ ಕಡೆಗಳಲ್ಲಿ ಚಿರತೆ ಓಡಾಡಿವೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬಂದಿ ಚಿರತೆ ಹೆಚ್ಚು ಓಡಾಡುವ ಎಂಡ್‌ ಪಾಯಿಂಟ್‌ ಪ್ರದೇಶದ ಬಳಿ ಬೋನು ಇರಿಸಲಾಗಿತ್ತು.

ಸೋಮವಾರ ಎಂಡ್‌ಪಾಯಿಂಟ್‌ ಬಳಿ ಇರಿಸಲಾದ ಬೋನು ಪರಿಶೀಲಿಸಿ, ಸ್ಥಳೀಯರೊಂದಿಗೂ ಚರ್ಚಿಸಿ ಬೋನನ್ನು ಇಲ್ಲಿಯೇ ಮುಂದುವರಿಸಬೇಕೇ ಅಥವಾ ಇನ್ನೊಂದು ಕಡೆಗೆ ಸ್ಥಳಾಂತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next