Advertisement

Manipal; ಡಾ|ರಂಜನ್‌ ಪೈಯವರಿಗೆ ಅಭಿನಂದನೆ

12:27 AM Jan 20, 2024 | Team Udayavani |

ಮಣಿಪಾಲ: ಶ್ರೀಕೃಷ್ಣಮಠದಲ್ಲಿ ಗುರುವಾರನಡೆದ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವದಲ್ಲಿ ಶ್ರೀಪಾದರಿಂದ ಪರ್ಯಾಯ ದರ್ಬಾರ್‌ ಸಮ್ಮಾನವನ್ನುಸ್ವೀಕರಿಸಿದ ಮಾಹೆ ಟ್ರಸ್ಟ್‌, ಎಂಇಎಂಜಿ ಅಧ್ಯಕ್ಷ ಡಾ| ರಂಜನ್‌ ಆರ್‌. ಪೈಯವರನ್ನು ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಶುಕ್ರವಾರ ನಡೆದ ಹೊಸ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಣಿಪಾಲ ಸಂಸ್ಥೆಗಳ ವತಿಯಿಂದ ಅಭಿನಂದಿಸಲಾಯಿತು.

Advertisement

ಸ್ವಾಮೀಜಿಯವರು ನೀಡಿದ ಫ‌ಲಕ, ಪೇಟ, ಸ್ಮರಣಿಕೆ, ಪ್ರಮಾಣಪತ್ರ, ಶಾಲನ್ನು ನೀಡಿ ವಸಂತಿ ಆರ್‌. ಪೈ, ಟಿ. ಸತೀಶ್‌ ಯು. ಪೈ, ಟಿ.ಅಶೋಕ್‌ ಪೈ ಅಭಿನಂದಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೆರೆದ ಸಭಾಸದರಿಗಾಗಿ ಪರ್ಯಾಯ ದರ್ಬಾರ್‌ ಅಭಿನಂದನೆಯನ್ನು ಮರುಸೃಷ್ಟಿಸಿ ತೋರಿಸಲಾಯಿತು.

ಡಾ| ಎಚ್‌. ಎಸ್‌. ಬಲ್ಲಾಳ್‌, ಲೆ| ಜ| ಡಾ| ಎಂ.ಡಿ.ವೆಂಕಟೇಶ್‌, ಹೊಸ ವರ್ಷದ ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು. ಮಣಿಪಾಲವು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬೆಳೆದ ಬಗೆ, ಇದಕ್ಕೆ ಕಾರಣರಾದ ಮಣಿಪಾಲ ಸಂಸ್ಥೆಗಳ ಸ್ಥಾಪಕ ಡಾ| ಟಿ.ಎಂ.ಎ.ಪೈ, ಡಾ|ರಾಮದಾಸ್‌ ಪೈ ಮತ್ತು ಡಾ| ರಂಜನ್‌ ಪೈಯವರ ಕೊಡುಗೆಯನ್ನು ಸ್ಮರಿಸಿ ಶ್ರೀಪಾದರು ಪರ್ಯಾಯ ದರ್ಬಾರ್‌ನಲ್ಲಿ ಡಾ| ರಂಜನ್‌ ಪೈಯವರನ್ನು ಸಮ್ಮಾನಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next