Advertisement

ದಶರಥನ ಆಸ್ಥಾನದಲ್ಲಿ 10 ಸಾವಿರ ಕೋಣೆಗಳಿದ್ದವು,ರಾಮ ಹುಟ್ಟಿದ್ದೆಲ್ಲಿ?

10:35 AM Jan 08, 2019 | |

ಹೊಸದಿಲ್ಲಿ : ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗುವ ಕಾಂಗ್ರೆಸ್‌ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Advertisement

ಎಸ್‌ಡಿಪಿಐ ದೆಹಲಿಯಲ್ಲಿ ಆಯೋಜಿಸಿದ್ದ  ಸಮಾವೇಶದಲ್ಲಿ  ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರವನ್ನು ವಿರೋಧಿಸಿ ಭಾಷಣ ಮಾಡಿದ ಅಯ್ಯರ್‌, ‘ದಶರಥ ಅತೀ ದೊಡ್ಡ ಚಕ್ರವರ್ತಿಯಾಗಿದ್ದ. ಅವರ ಅರಮನೆಯಲ್ಲಿ 10 ಸಾವಿರ ಕೋಣೆಗಳಿದ್ದವು. ರಾಮ ಇಂತಲ್ಲಿಯೇ ಹುಟ್ಟಿದ ಎಂದು ಹೇಳುವುದು ಹೇಗೆ. ಮಂದಿರ ನಿರ್ಮಾಣ ಮಾಡಿ, ಆದರೆ ಅಲ್ಲಿಯೇ ನಿರ್ಮಾಣ ಮಾಡಬೇಕೆನ್ನುವುದು ಸರಿಯಲ್ಲ’ ಎಂದಿದ್ದಾರೆ. 

ಇದೇ ವೇಳೆ ‘1992 ರಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡುವುದನ್ನು ತಡೆಯಲು ನರಸಿಂಹ ರಾವ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ವಿಫ‌ಲವಾಯಿತು .ರಾವ್‌ ಅವರು ಮಸೀದಿ ಉಳಿಸಿಕೊಳ್ಳಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ’ ಎಂದು ಹೇಳಿದ್ದಾರೆ.

ಅಯ್ಯರ್‌ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next