Advertisement

Kukke Subrahmanya, ಕೊಲ್ಲೂರಿನಲ್ಲಿ 11 ಜೋಡಿಗೆ ಮಾಂಗಲ್ಯ ಭಾಗ್ಯ

02:13 AM Feb 01, 2024 | Team Udayavani |

ಸುಬ್ರಹ್ಮಣ್ಯ/ ಕೊಲ್ಲೂರು: ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬುಧವಾರ ಸರಳ ಸಾಮೂಹಿಕ ವಿವಾಹ “ಮಾಂಗಲ್ಯ ಭಾಗ್ಯ’ ನಡೆಯಿತು.

Advertisement

ಪೂರ್ವಾಹ್ನ 11.20ರಿಂದ 12.20ರ ಅಭಿಜಿನ್‌ ಲಗ್ನ ಸುಮುಹೂರ್ತದಲ್ಲಿ ವಿವಾಹ ನೆರವೇರಿತು. ಕುಕ್ಕೆಯ ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಒಟ್ಟು 6 ಜೋಡಿಗಳು ಮತ್ತು ಕೊಲ್ಲೂರಿನಲ್ಲಿ 5 ಜೋಡಿಗಳು ಸಪ್ತಪದಿ ತುಳಿದರು. ಸುಬ್ರಹ್ಮಣ್ಯದಲ್ಲಿ ದೇಗುಲದ ಪುರೋಹಿತ ಮಧುಸೂದನ ಕಲ್ಲೂರಾಯ ಮತ್ತು ಕೊಲ್ಲೂರಿನಲ್ಲಿ ದೇಗುಲದ ಪುರೋಹಿತ ಗಜಾನನ ಜೋಯಿಸ್‌ ಧಾರ್ಮಿಕ ವಿಧಿ ನೆರವೇರಿಸಿದರು.

ಸುಬ್ರಹ್ಮಣ್ಯದಲ್ಲಿ
ಜಟ್ಟಿಪಳ್ಳದ ಪ್ರಮೋದ್‌-ಬಾಳುಗೋಡಿನ ವಿದ್ಯಾ ಪಿ., ಸುಬ್ರಹ್ಮಣ್ಯದ ನೂಚಿಲದ ಲೋಕೇಶ್‌ ಎನ್‌.-ಗೋಳಿತೊಟ್ಟಿನ ಸುಮಲತಾ ಎಸ್‌.ವಿ., ಸೋಣಂಗೇರಿಯ ಲೋಕೇಶ್‌-ದೊಡ್ಡತೋಟದ ನವ್ಯಾ ಎಂ., ಉಬರಡ್ಕ ಕುತ್ತುಮೊಟ್ಟೆಯ ಜಯಂತ- ಬೆಟ್ಟಂಪಾಡಿ ಗುಂಡಿಯಡ್ಕದ ಸರಸ್ವತಿ, ಮರಟಗೆರೆ ರೂಪನಗರದ ವಿನಯ ಎಸ್‌. ನಾಯಕ್‌-ಹೊಸಪೇಟೆ ಕಲ್ಲಹಳ್ಳಿಯ ಪೆರಿ ಬಾಯಿ, ಬಳ್ಪ ಎಣ್ಣೆಮಜಲಿನ ದಿವಾಕರ ಎ.-ನಾಲ್ಕೂರು ಗ್ರಾಮದ ಚತ್ರಪ್ಪಾಡಿಯ ವಿದ್ಯಾ ಸಿ.ಎಲ್‌. ಹಸೆಮಣೆಯೇರಿದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿ ಕಾರಿ ರಾಜಣ್ಣ, ವ್ಯವಸ್ಥಾಪನ ಸಮಿತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ಕೊಲ್ಲೂರಿನಲ್ಲಿ
ಕಂಬದಕೋಣೆಯ ಸುಬ್ರಹ್ಮಣ್ಯ ಪೂಜಾರಿ – ಆಲೂರಿನ ಅಶ್ವಿ‌ನಿ, ಹೆಂಗವಳ್ಳಿಯ ಅಜಿತ್‌ – ಹೊಂಬಾಡಿ ಮಂಡಾಡಿಯ ಮೂಕಾಂಬು, ಹೊಂಬಾಡಿ ಮಂಡಾಡಿಯ ವಿಟ್ಠಲ – ಹೆಂಗವಳ್ಳಿಯ ಅನಿತಾ, ಹಳ್ಳಿಹೊಳೆಯ ದೇವರಬಾಳು ನಿವಾಸಿ ಅನಿಲ್‌ – ಹಳ್ಳಿಹೊಳೆಯ ವಸಂತಿ, ಹಕ್ಲಾಡಿಯ ಚಂದ್ರಶೇಖರ – ಕುಂದಾಪುರದ ಜಲಜಾ ಹಸೆಮಣೆಯೇರಿದರು.

Advertisement

ದೇಗುಲದ ಸಿಇಒ ಪ್ರಶಾಂತ ಕುಮಾರ್‌ ಶೆಟ್ಟಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಉಪ ಕಾರ್ಯನಿರ್ವಹಣಾಧಿ ಕಾರಿ ಪುಷ್ಪಲತಾ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷೆ ವನಿತಾ ಸೇರುಗಾರ್‌, ಬೈಂದೂರು ತಹಶೀಲ್ದಾರ್‌ ನಾಗರಾಜ್‌, ಮೊದಲಾದವರು ಉಪಸ್ಥಿತರಿದ್ದರು.

ವಧುವಿಗೆ 10 ಸಾವಿರ ರೂ., ವರನಿಗೆ 5 ಸಾವಿರ ರೂ., ವಧುವಿಗೆ ತಾಳಿಗುಂಡು, ಸಹಿತ ವಧೂವರರಿಗೆ ಸೀರೆ ಪಂಚೆ ಮುಂತಾದವುಗಳನ್ನು ದೇಗುಲದ ವತಿಯಿಂದ ಪ್ರಸಾದ ರೂಪದಲ್ಲಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next