Advertisement

Mangaluru ವಾಹನ ಕಳವು: ಆರೋಪಿಯ ಬಂಧನ

11:54 PM Dec 03, 2023 | Team Udayavani |

ಮಂಗಳೂರು: ವಾಹನ ಕಳವು ಮಾಡುತ್ತಿದ್ದ ಕುಖ್ಯಾತ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

Advertisement

ಉಳ್ಳಾಲ ತಾಲೂಕು ಬೆಳ್ಮ ನಿತ್ಯಾನಂದ ನಗರದ ಹುಸೈನ್‌ ಜಾಹೀದ್‌ (24) ಬಂಧಿತ ಆರೋಪಿ. ಈತನಿಂದ 1 ಹೋಂಡಾ ಡೀಯೋ ಸ್ಕೂಟರ್‌, 1 ಹೋಂಡಾ ಆ್ಯಕ್ಟಿವಾ, 1 ಸುಜುಕಿ ಆ್ಯಕ್ಸೇಸ್‌ ಸ್ಕೂಟರ್‌ ಸೇರಿದಂತೆ ಒಟ್ಟು 68 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಅ. 22ರಂದು ಅಂಬ್ಲಿಮೊಗರು ಗ್ರಾಮದ ತಿಲಕನಗರ ಎಂಬಲ್ಲಿ ಐಸಮ್ಮ ಅವರ ಹೋಂಡಾ ಡೀಯೋ ಕಳವು ಮಾಡಲಾಗಿತ್ತು. ನ.16ರಂದು ದೇರಳಕಟ್ಟೆಯ ಗ್ರೀನ್‌ ಗ್ರೌಂಡ್‌ ಬಳಿ ಗುಲಾಮ್‌ ಹುಸೇನ್‌ ಅವರ ಹೋಂಡಾ ಆ್ಯಕ್ಟಿವಾ ವಾಹನ ಕಳವಾಗಿತ್ತು.

ಈ ಎರಡೂ ಪ್ರಕರಣಗಳ ಆರೋಪಿಯನ್ನು ಕೊಣಾಜೆ ಪೊಲೀಸರು ಹುಡುಕುತ್ತಿದ್ದರು. ಡಿ. 1ರಂದು ಪಿಎಸ್‌ಐ ಅಶೋಕ ಅವರು ಸಿಬಂದಿ ಜತೆ ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಹುಸೇನ್‌ ಜಾಹೀದ್‌ನನ್ನು ಬಂಧಿಸಿ, ಕಳವು ಮಾಡಿದ ಸ್ಕೂಟರ್‌ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್‌ ಆಯುಕ್ತ ಅನುಪಮ್‌ ಅಗರವಾಲ್‌ ಮಾರ್ಗದರ್ಶನದಂತೆ, ಡಿಸಿಪಿಗಳಾದ ಸಿದ್ದಾರ್ಥ ಗೋಯಲ್‌, ದಿನೇಶ್‌ ಕುಮಾರ್‌ ನಿರ್ದೇಶನದಂತೆ, ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ಧನ್ಯ ಎನ್‌. ನಾಯಕ್‌ ಅವರ ನೇತೃತ್ವದಲ್ಲಿ ಈ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಕೊಣಾಜೆ ಠಾಣೆಯ ಪ್ರಭಾರ ಪೊಲೀಸ್‌ ನಿರೀಕ್ಷಕ ಬಾಲಕೃಷ್ಣ, ಪೊಲೀಸ್‌ ಉಪ ನಿರೀಕ್ಷಕರುಗಳಾದ ನಾಗರಾಜ್‌ ಎಸ್‌., ಪುನೀತ್‌ ಗಾಂವ್‌ಕರ್‌, ಅಶೋಕ್‌, ವಿನೋದ್‌, ಸಿಬಂದಿಗಳಾದ ಸಂತೋಷ್‌ ಕೆ.ಸಿ, ಸುರೇಶ್‌ ತಳವಾರ್‌ ಪಾಲ್ಗೊಂಡಿದ್ದರು.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next