Advertisement

Mangaluru: ಆಸ್ಪತ್ರೆಗಳಲ್ಲಿ ಸುರಕ್ಷೆ ಬಗ್ಗೆ ಆ.20ರಂದು ವಿಶೇಷ ಸಭೆ: ದಿನೇಶ್‌ ಗುಂಡೂರಾವ್‌

12:38 AM Aug 18, 2024 | Team Udayavani |

ಮಂಗಳೂರು: ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವ ವೈದ್ಯರು, ನರ್ಸ್‌ಗಳು ಸಹಿತ ದಾಖಲಾಗುವ ರೋಗಿಗಳು, ಸಾರ್ವಜನಿಕರ ಸುರಕ್ಷೆ ನಿಟ್ಟಿನಲ್ಲಿ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಲು ಆ.20ರಂದು ವಿಶೇಷ ಸಭೆ ಕರೆಯಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಮಂಗಳೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಕೋಲ್ಕತಾದ ವೈದ್ಯ ವಿದ್ಯಾರ್ಥಿನಿಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಆತಂಕ, ಗಾಬರಿ ಸೃಷ್ಟಿಸಿದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು, ಶುಶ್ರೂಕರು, ಸಿಬಂದಿ ವರ್ಗದವರಿಗೆ ಹೆಚ್ಚಿನ ಮಹಿಳೆಯರೇ ಆಗಿದ್ದು, ಭದ್ರತೆ, ಸುರಕ್ಷೆ ಅತಿ ಮುಖ್ಯ. ಈ ನಿಟ್ಟಿನಲ್ಲಿ ಖಾಸಗಿ, ಸರಕಾರಿ ವೈದ್ಯರು, ಶುಶ್ರೂಶಕರು, ಆಸ್ಪತ್ರೆ ಮಾಲಕರು, ಸಂಘ ಸಂಸ್ಥೆ ಪ್ರಮುಖರ ಸಭೆಯನ್ನು ಮಂಗಳವಾರ ಕರೆದಿದ್ದೇನೆ. ಸುರಕ್ಷೆ ವಾತಾವರಣ ನಿರ್ಮಾಣ ಮಾಡಲು ಏನೆಲ್ಲ ಕ್ರಮ ಕೈಗೊಳ್ಳಬೇಕೆಂದು ಅಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದರು.

ಆಸ್ಪತ್ರೆಗಳಲ್ಲಿ ವೈದರು, ನರ್ಸ್‌, ಸಿಬಂದಿಯನ್ನು ನಿಂದಿಸಬಾರದು. ಫೋನ್‌ನಲ್ಲಿ ರೆಕಾರ್ಡ್‌ ಮಾಡುವುದು, ಸಾಮಾಜಿಕ ಜಾಲತಣದಲ್ಲಿ ಪೋಸ್ಟ್‌ ಮಾಡುವವರ ವಿರುದ್ದವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಾನೂನು ಪಾಲನೆ ಎಲ್ಲರ ಜವಾಬ್ದಾರಿ. ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷೆ ಉಪಕರಣ ಸುಸ್ಥಿತಿಯಲ್ಲಿಡುವುದು ಕಡ್ಡಾಯ ಎಂದು ಸೂಚನೆ ನೀಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next