Advertisement

Mangaluru ಸ್ಕೂಟರ್‌ ಕಳವು: ಪ್ರಕರಣ ದಾಖಲು

10:46 PM Jul 17, 2024 | Team Udayavani |

ಮಂಗಳೂರು: ಸೆಕೆಂಡ್‌ ಹ್ಯಾಂಡ್‌ ದ್ವಿಚಕ್ರ ವಾಹನಗಳ ಮಾರಾಟ ಮತ್ತು ಖರೀದಿ ಅಂಗಡಿಯಿಂದ ದ್ವಿಚಕ್ರ ವಾಹನವನ್ನು ಕಳವು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ವೆಲೆನ್ಸಿಯಾದಲ್ಲಿರುವ “ಬೈಕ್‌ ಸೆಂಟರ್‌’ ಅಂಗಡಿಗೆ ಜು. 15ರಂದು ಇಬ್ಬರು ಯುವಕರು ಬಂದು ವಾಹನಗಳ ಖರೀದಿ ಬಗ್ಗೆ ಮಾತನಾಡಿದರು.

ಅಂಗಡಿ ಯವರು ವಾಹನವನ್ನು ನೋಡುವಂತೆ ತಿಳಿಸಿದರು. ಆ ಯುವಕರು ಅಂಗಡಿಯ ಎದುರು ಇದ್ದ ದ್ವಿಚಕ್ರ ವಾಹನಗಳ ಪೈಕಿ ಸ್ಕೂಟರೊಂದನ್ನು ಸ್ಟಾರ್ಟ್‌ ಮಾಡಿದರು. ಅಂಗಡಿಯವರು ನೋಡುತ್ತಿದ್ದಂತೆಯೇ ಯುವಕರು ಸ್ಕೂಟರ್‌ ಅನ್ನು ಚಲಾಯಿಸಿಕೊಂಡು ಮುಖ್ಯರಸ್ತೆಯಲ್ಲಿ ಹೋಗಿದ್ದಾರೆ.

ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next