Advertisement

Mangaluru: ರ್‍ಯಾಂಬೊ ಸರ್ಕಸ್‌ ಪ್ರದರ್ಶನ ಆರಂಭ

09:58 AM Sep 22, 2023 | Team Udayavani |

ಮಂಗಳೂರು: ಸರ್ಕಸ್‌ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಡೇರೆ ಬಿಟ್ಟು ಹವಾನಿಯಂತ್ರಿತ ಸಭಾಂಗಣ ಪ್ರವೇಶಿಸಿದೆ. ರ್‍ಯಾಂಬೊ ಸರ್ಕಸ್‌ ಕಂಪೆನಿಯರಿಂದ ನಗರದ ಟಿ.ಎಂ.ಎ ಪೈ ಕನ್ವೆನ್ಷನ್‌ ಸೆಂಟರ್‌ ನ ಹವಾನಿಯಂತ್ರಿತ ಸಭಾಂಗಣದಲ್ಲಿ ಸೆ. 21ರಿಂದ 24ರ ವರೆಗೆ ನಡೆಯಲಿರುವ ಸರ್ಕಸ್‌ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಲಾಯಿತು.

Advertisement

ಶಾಸಕ ವೇದವ್ಯಾಸ ಕಾಮತ್‌ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಮಂಗಳೂರಿನಲ್ಲಿ ಮೊದಲ ಬಾರಿಗೆ ಹವಾನಿಯಂತ್ರಿತ ಸಭಾಂಗಣದಲ್ಲಿ ಸರ್ಕಸ್‌ ಪ್ರದರ್ಶನ ಆಯೋಜಿಸಿದ್ದು ಶ್ಲಾಘನೀಯ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಹಿತ ಆಗಮಿಸಿ ಈ ಅಪರೂಪದ ಕಲೆಯನ್ನು ಪ್ರೋತ್ಸಾಹಿಸಬೇಕು. ಒತ್ತಡದ ಬದುಕಿನಲ್ಲಿರುವ ನಗರದ ಜನರಿಗೆ ಸರ್ಕಸ್‌ ವಿಶಿಷ್ಟ ಮನೋರಂಜನೆ ನೀಡುತ್ತದೆ ಎಂದರು. ನಗರದ ವಿವಿಧ ವಿಶೇಷ ಶಾಲೆಗಳ ಮಕ್ಕಳಿಗೆ ಈ ಸರ್ಕಸ್‌ ನೋಡುವಂತೆ ಅವರಿಗೆ ಬೇಕಾದ ಸಹಕಾರವನ್ನು ಶಾಸಕನಾಗಿ ಒದಗಿಸಿಕೊಡುತ್ತೇನೆ ಎಂದರು.

ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮಾತನಾಡಿ, 32 ವರ್ಷ ಇತಿಹಾಸ ಇರುವ ರ್‍ಯಾಂಬೊ ಸರ್ಕಸ್‌ ಈಗ ಒಳಾಂಗಣ ಸಭಾಗೃಹದಲ್ಲಿ ಪ್ರದರ್ಶನ ನೀಡಲು ಮುಂದಾಗಿದೆ. ಯಾವುದೇ ಪ್ರಾಣಿಗಳನ್ನು ಬಳಸದೆ ಕೇವಲ 60ಕ್ಕೂ ಅಧಿಕ ಸಿಬಂದಿಗಳೊಂದಿಗೆ ಹಲವು ರೀತಿಯ ಕಸರತ್ತುಗಳೊಂದಿಗೆ ಮನರಂಜಿಸುತ್ತಿದೆ ಎಂದರು.

ಕಾರ್ಪೊರೇಟರ್‌ ಶಕೀಲ ಕಾವ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ, ರ್‍ಯಾಂಬೊ ಸರ್ಕಸ್‌ ಎಂಡಿ ಸುಜಿತ್‌ ದಿಲೀಪ್‌, ಉದ್ಯಮಿ ವಸಂತ ಪೂಜಾರಿ, ನಿಸರ್ಗ ಪಬ್ಲಿಸಿಟಿಯ ಮಂಜನಾಥ್‌ ಮೊದಲಾದವರಿದ್ದರು.

ಬುಕ್‌ಮೈ ಶೋದಲ್ಲೂ ಬುಕಿಂಗ್‌

Advertisement

ರ್‍ಯಾಂಬೊ ಸರ್ಕಸ್‌ ಕಂಪೆನಿಯರು ಮೈ ನವಿರೇಳಿಸುವ ಹೊಸ ಪ್ರಯೋಗಗಳೊಂದಿಗೆ ದಿಲ್ಲಿ, ಮುಂಬಯಿ, ಬೆಂಗಳೂರು, ಗೋವಾ, ಕೊಚ್ಚಿ ಹಾಗೂ ಇನ್ನೂ ಹಲವಾರು ಮಹಾನಗರಿಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ನೀಡಿದ್ದಾರೆ.  ಕೊರೊನಾ ಅಲೆಗೆ ತತ್ತರಿಸಿದ ಸರ್ಕಸ್‌ ಪ್ರದರ್ಶನವು ಹೊಸತನದೊಂದಿಗೆ ಜನರ ನಡುವೆ ಬರುವ ನಿಟ್ಟಿನಲ್ಲಿ ಹವಾನಿಯಂತ್ರಿತ ಸಭಾಂಗಣದಲ್ಲಿ ಏರ್ಪಡಿಸಿದೆ.

2 ಗಂಟೆಗಳ ಅವಧಿಯ ಸರ್ಕಸ್‌ ಇದಾಗಿದೆ. ರ್‍ಯಾಂಬೊ ತಂಡವು ಬಬಲ್‌ ಶೋ, ಸ್ಕೇಟಿಂಗ್‌, ಲ್ಯಾಡರ್‌ ಬ್ಯಾಲೆನ್ಸ್‌, ಸ್ವಾರ್ಡ್‌ ಆಕ್ಟ್, ಕ್ಯೂಬ್‌ ಜಗ್ಲಿಂಗ್‌, ರೊಲ್ಲಾ ಬೊಲ್ಲಾ, ಹುಲಾ ಹೂಪ್‌ ಮತ್ತು ಏರಿಯಲ್‌ ರೋಪ್‌ ಜತೆಗೆ ಅನೇಕ ಮನೋರಂಜನಾತ್ಮಕ ಪ್ರದರ್ಶನಗಳನ್ನು ಹೊಂದಿದೆ.

ಬಾಲ್ಯದಲ್ಲಿ ಆನಂದಿಸಿದ ನಗು ತುಂಬಿದ ಹಾಸ್ಯ ಸನ್ನಿವೇಶಗಳನ್ನು ಮತ್ತೆ ಸವಿಯುವುದಕ್ಕೆ ಇಲ್ಲಿ ಅವಕಾಶವಿದೆ. ಟಿಕೆಟ್‌ಗಳು ಕೌಂಟರ್‌ಗಳಲ್ಲಿ ಲಭ್ಯವಿವೆ. ಮಾತ್ರವಲ್ಲದೆ ಬುಕ್‌ ಮೈ ಶೋ ಆ್ಯಪ್‌ನ ಮೂಲಕವೂ ಸೀಟು ಕಾದಿರಿಸಿಕೊಳ್ಳಬಹುದಾಗಿದೆ.

ಪ್ರದರ್ಶನ ಸಮಯ

ಸೆ. 22ರ ಮಧ್ಯಾಹ್ನ 1, ಸಂಜೆ 4, ಹಾಗೂ 7 ಗಂಟೆ ಸೆ. 23ರ ಬೆಳಗ್ಗೆ 11, ಮಧ್ಯಾಹ್ನ 1, ಸಂಜೆ 4, ಹಾಗೂ 7 ಗಂಟೆ ಸೆ. 24ರ ಬೆಳಗ್ಗೆ 11, ಮಧ್ಯಾಹ್ನ 1, ಸಂಜೆ 4 ಹಾಗೂ 7 ಗಂಟೆ

Advertisement

Udayavani is now on Telegram. Click here to join our channel and stay updated with the latest news.

Next