Advertisement

Mangaluru: ಪ್ರಚೋದನಕಾರಿ ಸಂದೇಶ: ಸೆರೆ

09:18 PM Jun 04, 2024 | Team Udayavani |

ಮಂಗಳೂರು: ವಾಟ್ಸ್ಆ್ಯಪ್‌ನಲ್ಲಿ ಪ್ರಚೋದನಾತ್ಮಕ ವಾಯ್ಸ್ ಮೆಸೇಜ್‌ ಪಸರಿಸಿದ ಆರೋಪದಲ್ಲಿ ಮಂಗಳೂರು ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

Advertisement

ಉಳ್ಳಾಲ ನಿವಾಸಿ ಅಲ್ತಾಫ್ ಎಚ್‌.ಬಿ. ಬಂಧಿತ ಆರೋಪಿ.

ಮುಗ್ದರು ಬಲಿಯಾದಾಗ ನಾಯಕರು ಮುಂದೆ ಬಂದು ಹೇಳಿಕೆ ನೀಡುತ್ತಾರೆ. ಮುಗªರ ಬದಲು ಅಂತಹ ನಾಯಕರು ಸಾಯಬೇಕಾಗಿದೆ ಎಂಬುದಾಗಿ ಆ ವಾಯ್ಸ್ ಮೆಸೇಜ್‌ನಲ್ಲಿ ಹೇಳಿದ್ದ.

ಬಂಧಿತನ ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ 153 ಎ, 120 ಬಿ, 504 ಮತ್ತು 505 ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next