Advertisement

Mangaluru ಖಾಸಗಿ ಬಸ್‌ ಢಿಕ್ಕಿ: ಆಟೋ ರಿಕ್ಷಾ ಜಖಂ

01:43 AM Aug 30, 2024 | Team Udayavani |

ಮಂಗಳೂರು: ಮುಂಭಾಗದಲ್ಲಿ ತೆರಳುತ್ತಿದ್ದ ರಿಕ್ಷಾವೊಂದಕ್ಕೆ ಖಾಸಗಿ ಬಸ್‌ ಢಿಕ್ಕಿ ಹೊಡೆದ ಪರಿಣಾಮ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಹಂಪನಕಟ್ಟೆ ಸಮೀಪ ಗುರುವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಬಸ್‌ ಚಾಲಕನಿಗೆ ರಕ್ತದೊತ್ತಡ ದಿಂದಾಗಿ ತಲೆ ಸುತ್ತು ಬಂದ ಹಿನ್ನೆಲೆ ಘಟನೆ ನಡೆದಿದೆ ಎನ್ನಲಾಗಿದೆ. ಜಪ್ಪು ಬಪ್ಪಾಲ್‌ ನಿವಾಸಿ ಉಸ್ಮಾನ್‌ ಮತ್ತು ರಮ್ಲಾ ಹಾಗೂ ಅವರ ಪುತ್ರ ಮೊಹಮ್ಮದ್‌ ನಝಲ್‌ ಗಾಯಗೊಂಡವರು.

ಉಸ್ಮಾನ್‌ ಅವರು ಪತ್ನಿ ಮತ್ತು ಮಗನ ಜತೆ ಗುರು ವಾರ ಮಧ್ಯಾಹ್ನ ರಿಕ್ಷಾದಲ್ಲಿ ಮಂಗಳೂರಿಗೆ ಬಂದಿದ್ದರು. ಹಂಪನ ಕಟ್ಟೆ ತಲುಪುತ್ತಿದ್ದಂತೆ ಖಾಸಗಿ ಬಸ್‌ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

ಖಾಸಗಿ ಬಸ್‌ ರಸ್ತೆಬದಿ ನಿಲ್ಲಿಸಲಾದ ಕಾರು, ರಿಕ್ಷಾ ಹಾಗೂ ಬೈಕ್‌ಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಕದ್ರಿ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿ ಶೀಲಿಸಿದ್ದು, ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next