Advertisement

Mangaluru ಮನೆಯ ಬೀಗ ಮುರಿದು ಚಿನ್ನಾಭರಣ ಕಳವು

10:04 PM May 21, 2024 | Team Udayavani |

ಮಂಗಳೂರು: ಮನೆಯ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿರುವ ಘಟನೆ ಕುಲಶೇಖರ ಜ್ಯೋತಿ ನಗರದಲ್ಲಿ ನಡೆದಿದೆ.

Advertisement

ಮನೆಯವರು ಮೇ 17ರಂದು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದರು. ಮೇ 20ರಂದು ನೋಡಿದಾಗ ಎದುರು ಬಾಗಿಲಿನ ಬೀಗ ಮುರಿದಿತ್ತು. ಒಳಗೆ ಹೋಗಿ ನೋಡಿದಾಗ ಯಾರೋ ಕಳ್ಳರು ಕಪಾಟಿನ ಬಾಗಿಲನ್ನು ಮುರಿದು ಅದರೊಳಗಿದ್ದ 1.3 ಗ್ರಾಂ ತೂಕದ ಚಿನ್ನದ ಒಂದು ಪೆಂಡೆಂಟ್‌, 5 ಗ್ರಾಂ ತೂಕದ ಚಿನ್ನದ ಬ್ರಾಸ್ಲೆಟ್‌, 3 ಸಣ್ಣ ಉಂಗುರಗಳು, ಬೆಳ್ಳಿಯ ಪೆಂಡೆಂಟ್‌, ಕಾಲುಗೆಜ್ಜೆ, 3 ಬೆಳ್ಳಿಯ ಉಂಗುರಗಳು, ವಾಚ್‌ ಸೇರಿದಂತೆ ಅಂದಾಜು 66,000 ರೂ. ಮೌಲ್ಯದ ಚಿನ್ನಾಭರಣಗಳು ಹಾಗೂ ಅಂದಾಜು 1,000 ರೂ. ಮೌಲ್ಯದ ಬೆಳ್ಳಿಯ ಆಭರಣಗಳು ಕಳವು ಮಾಡಿರುವುದು ಗೊತ್ತಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಯಿಂದ ಹಣ ಕಳವು
ಮಂಗಳೂರು: ನಗರದ ಕಣ್ಣಿನ ಆಸ್ಪತ್ರೆಯ ಬೀಗ ಮುರಿದು ನಗದು ಹಣ ಕಳವು ಮಾಡಲಾಗಿದೆ.
ಆಸ್ಪತ್ರೆಯ ಆಡಳಿತ ಅಧಿಕಾರಿ ಮೇ 18ರಂದು ರಾತ್ರಿ 9ಕ್ಕೆ ಲಾಕ್‌ ಮಾಡಿ ತೆರಳಿದ್ದರು. ಮೇ 19ರಂದು ಬೆಳಗ್ಗೆ 8 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಬೀಗವನ್ನು ಒಡೆದು ಒಳಗಡೆ ಡ್ರಾವರ್‌ಗಳಲ್ಲಿದ್ದ 74,000 ರೂ.ಗಳನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿದೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಲಿಂಬಿ: ಬೈಕ್‌ ಕಳವು
ಮಂಗಳೂರು: ಚಿಲಿಂಬಿಯ ಕ್ಲಿನಿಕ್‌ವೊಂದರ ಬಳಿ ನಿಲ್ಲಿಸಿದ್ದ ಬೈಕ್‌ ಕಳವಾಗಿದೆ.

ರವಿಶಂಕರ್‌ ಎಂ.ಕೆ. ಅವರು ಬೈಕ್‌ ಅನ್ನು ಮೇ 19ರಂದು ಮಧ್ಯಾಹ್ನ 1 ಗಂಟೆಗೆ ಕ್ಲಿನಿಕ್‌ನ ಹಿಂಭಾಗದಲ್ಲಿ ತಮ್ಮ ಮನೆಯ ಬಳಿ ನಿಲ್ಲಿಸಿದ್ದರು. ಮೇ 20ರಂದು ಬೆಳಗ್ಗೆ 6 ಗಂಟೆಗೆ ನೋಡಿದಾಗ ಬೈಕ್‌ ಕಳವಾಗಿತ್ತು. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next