Advertisement

Mangaluru: ರೈಲು ನಿಲ್ದಾಣದ ಬಳಿ ವೈದ್ಯರ ಮೊಬೈಲ್‌ ಕಸಿದು ಪರಾರಿ 

09:32 PM May 28, 2024 | Team Udayavani |

ಮಂಗಳೂರು: ವೈದ್ಯರೋರ್ವರ ಕೈಯಲ್ಲಿದ್ದ ಮೊಬೈಲ್‌ ಕಸಿದು ಪರಾರಿಯಾದ ಘಟನೆ ನಗರದ ಕೇಂದ್ರ ರೈಲು ನಿಲ್ದಾಣದ ಬಳಿ ನಡೆದಿದೆ.

Advertisement

ಡಾ| ಸುಜೇಯ್‌ ವಿ.ಕೆ. ಅವರು ಮೇ 25ರಂದು ರಾತ್ರಿ ಕೇಂದ್ರ ರೈಲ್ವೇ ನಿಲ್ದಾಣ ಸಮೀಪವಿರುವ ಟಿಟಿಇ ವಿಶ್ರಾಂತಿ ಗೃಹದ ಎದುರಿನ ರಸ್ತೆಯಲ್ಲಿ ನಿಂತು ರೈಲಿನಲ್ಲಿ ಬರುವ ಪತ್ನಿಗಾಗಿ ಕಾಯುತ್ತಿದ್ದರು.

ರಾತ್ರಿ 10.05ರಿಂದ 10.25ರ ನಡುವೆ ರೈಲು ನಿಲ್ದಾಣದ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್‌ ಧರಿಸಿಕೊಂಡು ಬಂದ ವ್ಯಕ್ತಿಯೋರ್ವ ಸುಜೇಯ್‌ ಅವರ ಕೈಯಲ್ಲಿದ್ದ ಮೊಬೈಲ್‌ ಸೆಟ್‌ ಅನ್ನು ಕಸಿದುಕೊಂಡು ಮುತ್ತಪ್ಪ ಗುಡಿಯ ಕಡೆಗೆ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next