Advertisement

Mangaluru: ಹಳಿ ನಿರ್ವಹಣೆ ಕಾಮಗಾರಿಯಿಂದ ರೈಲು ಸೇವೆಯಲ್ಲಿ ವ್ಯತ್ಯಯ

03:17 AM Oct 17, 2024 | Team Udayavani |

ಮಂಗಳೂರು: ಪಾಲಕ್ಕಾಡ್‌ ವಿಭಾಗದ ವಿವಿಧ ಪ್ರದೇಶಗಳಲ್ಲಿ ಹಳಿ ನಿರ್ವಹಣೆ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

Advertisement

ಅ. 20ರಂದು ಎರ್ನಾಕುಳಂ ಜಂಕ್ಷನ್‌ನಿಂದ ಹೊರಡುವ 12977 ಸಂಖ್ಯೆಯ ಎರ್ನಾಕುಳಂ ಜಂಕ್ಷನ್‌-ಅಜೆ¾ರ್‌ ಜಂಕ್ಷನ್‌ ಮರುಸಾಗರ್‌ ವೀಕ್ಲಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು 50 ನಿಮಿಷ ವ್ಯತ್ಯಯವಾಗಲಿದೆ. ಎರ್ನಾಕುಳಂ ಜಂಕ್ಷನ್‌ನಿಂದ ಹೊರಡುವ ನಂ. 16338 ಎರ್ನಾಕುಳಂ ಜಂಕ್ಷನ್‌-ಓಖಾ ಬೈ ವೀಕ್ಲಿ ಎಕ್ಸ್‌ಪ್ರೆಸ್‌ ರೈಲು ನ. 1ರಂದು 1 ಗಂಟೆ ಕಾಲ ವ್ಯತ್ಯಯವಾಗಲಿದೆ.

ನ.6ರಂದು ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡುವ 22633 ತಿರುವನಂತಪುರಂ ಸೆಂಟ್ರಲ್‌-ಹಜ್ರತ್‌ ನಿಜಾಮುದ್ದೀನ್‌ ಜಂಕ್ಷನ್‌ ವೀಕ್ಲಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು 30 ನಿಮಿಷಗಳ ಕಾಲ ವ್ಯತ್ಯಯವಾಗಲಿದೆ ಎಂದು ರೈಲ್ವೇ ಇಲಾಖೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next