Advertisement

Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್‌ ಆರೋಪ

02:27 PM Oct 05, 2024 | Team Udayavani |

ಮಂಗಳೂರು: ಕಳೆದ ಒಂದೂವರೆ ವರ್ಷದಿಂದ ಸಿದ್ದರಾಮಯ್ಯ ಸರಕಾರ ಬಂದ  ಬಳಿಕ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಗ್ರಾ.ಪಂ.ನಿಂದ ಹಿಡಿದು ನಗರ ಸ್ಥಳೀಯ ಸಂಸ್ಥೆಯವರೆಗೆ ಎಲ್ಲ ಕಡೆಯೂ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಶಾಸಕರ ನಿಧಿ ಕೂಡಾ ಬಿಡುಗಡೆಯಾಗಿಲ್ಲ, ಅಭಿವೃದ್ಧಿ ಕಡೆಗಣನೆಯಾಗಿದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆರೋಪ ಮಾಡಿದ್ದಾರೆ.

Advertisement

ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸಿಎಂ ಆಗಿದ್ದಾಗ ಅತಿಹೆಚ್ಚು ಅಭಿವೃದ್ಧಿ ಅನುದಾನ ನೀಡಲಾಗಿತ್ತು. ಚುನಾವಣೆ ಮೊದಲು ಕಾಂಗ್ರೆಸ್ ಆಶ್ವಾಸನೆ ಕೊಟ್ಟಿತ್ತು. 5 ಗ್ಯಾರಂಟಿ ಘೋಷಿಸಿತ್ತು. ಆದರೆ ಈಗ ಫಲಾನುಭವಿಗಳಿಗೆ ಹಣ ಬರುತ್ತಿಲ್ಲ‌. ಯುವನಿಧಿಯಲ್ಲಿ ಇನ್ನೂ ಹಣವೇ ಬಂದಿಲ್ಲ ಎಂದರು.

ಉಚಿತ ಅಕ್ಕಿ ಕೊಡೋದಾಗಿ ಹೇಳಿದರು, ಈಗ ಅದನ್ನೂ ನಿಲ್ಲಿಸುವ ಯತ್ನದಲ್ಲಿದ್ದಾರೆ. ಎಲ್ಲಾ ಡೈರಿಗಳೂ ನಷ್ಟದಲ್ಲಿವೆ. ನಮ್ಮ ಮೇಲೆ ಯಾವುದೇ ಆಧಾರವಿಲ್ಲದೆ ಶೇ.40 ಕಮಿಷನ್‌ ಆರೋಪ ಮಾಡಿದ್ದರು. ಈಗ ಶೇ.80 ಆಗಿದೆ ಎಂದು ಹೇಳಿದರು.

ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ ಪೂರ್ಣ ದಾಖಲೆಗಳಿದ್ದರೂ ಸಿದ್ದರಾಮಯ್ಯ ನೈತಿಕತೆ ಆಧಾರದಲ್ಲಿ ರಾಜಿನಾಮೆ ಕೊಡುವ ಬದಲು ಮುಖವುಳಿಸುವ ಹೇಳಿಕೆ ನೀಡುತ್ತಿರುವುದು ಅಚ್ಚರಿ ಎಂದ ಅವರು ರಾಜ್ಯ ಸರಕಾರ ದಿವಾಳಿಯಾಗಿರುವುದು ಒಂದೆಡೆಯಾದರೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ವಿಫಲವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next