Advertisement

ಮಂಗಳೂರು: ಫ್ಲ್ಯಾಟ್‌ ನೀಡದೆ ವಂಚನೆ: ದೂರು

12:53 AM Feb 16, 2023 | Team Udayavani |

ಮಂಗಳೂರು: ಫ್ಲ್ಯಾಟ್‌ ಖರೀದಿ ಬಗ್ಗೆ ಕರಾರು ಪತ್ರ ಮಾಡಿ ಹಣ ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ನಗರ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ವ್ಯಕ್ತಿಯೋರ್ವರು 2015ರಲ್ಲಿ ಪ್ರಾವಿಡೆಂಟ್‌ ದಶಾ ಎಂಬ ಹೊಸ ವಸತಿ ಸಮುಚ್ಚಯದ 2ನೇ ಮಹಡಿಯ ಮನೆ ಖರೀದಿಸುವ ಬಗ್ಗೆ ಪಾಲುದಾರರಾದ ಜಾನ್‌ ಸಿಲ್ವೆಸ್ಟರ್‌ ಸಲ್ದಾನ ಮತ್ತು ಜೀನ್‌ ರೂಪಾ ಸಲ್ದಾನ ಅವರೊಂದಿಗೆ ಕರಾರು ಪತ್ರ ಮಾಡಿಕೊಂಡಿದ್ದು ಹಂತ ಹಂತವಾಗಿ 26 ಲ.ರೂ. ಹಣ ನೀಡಿದ್ದರು. ಆ ಕಟ್ಟಡ ನಿರ್ಮಾಣದ ಜಾಗ ಅನಿಲ್‌ ವೇಗಸ್‌ ಮತ್ತು ಮಾವೀಸ್‌ ಎಸ್‌.ಜೆ. ವೇಗಸ್‌ ಅವರಿಗೆ ಸೇರಿದ್ದು ಈ ನಾಲ್ವರು ಆರೋಪಿಗಳು ವಸತಿಯನ್ನು ಹಣ ಪಾವತಿಸಿದವರಿಗೆ ನೀಡದೆ ಬ್ಯಾಂಕ್‌ನಲ್ಲಿ 2 ಕೋ.ರೂ.ಗಳಿಗೆ ಅಡಮಾನ ಇರಿಸಿ ವಂಚಿಸಿದ್ದಾರೆ. ಈ ಬಗ್ಗೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸ ಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next