Advertisement

ಮಳೆನೀರು ಸಮಸ್ಯೆಯಿಂದ ಮುಕ್ತಿ ; ಮ್ಯಾನ್‌ಹೋಲ್‌ಗಿಳಿದ ಕಾರ್ಪೊರೇಟರ್‌ !

12:13 PM Jun 25, 2020 | mahesh |

ಮಹಾನಗರ: ಮಳೆ ನೀರಿನಿಂದಾಗಿ ಉಂಟಾಗಿದ್ದ ಸಮಸ್ಯೆ ಸರಿಪಡಿಸುವುದಕ್ಕಾಗಿ ಕಾರ್ಪೊರೇಟರ್‌ ಓರ್ವರು ತಾವೇ ಸ್ವತಃ “ಮ್ಯಾನ್‌ಹೋಲ್‌’ಗೆ ಇಳಿದಿರುವ ಘಟನೆ ಕದ್ರಿಕಂಬಳದಲ್ಲಿ ಮಂಗಳವಾರ ನಡೆದಿದೆ. ಕದ್ರಿಕಂಬಳ ರಸ್ತೆಯ ಚರಂಡಿಯಲ್ಲಿ ಹಲವು ವರ್ಷಗಳಿಂದ ಮಳೆನೀರು ಹರಿಯುವಿಕೆಗೆ ತಡೆಯುಂಟಾಗಿ ಸಮಸ್ಯೆಯಾಗಿತ್ತು. ಇದು ಒಳಚರಂಡಿಯ (ಸೀವೇಜ್‌) ಮ್ಯಾನ್‌ಹೋಲ್‌ನಂತೆ ಇರುವುದರಿಂದ ಪಾಲಿಕೆಯ ಕಾರ್ಮಿಕರು ಇಳಿಯಲು ಒಪ್ಪಲಿಲ್ಲ. ಆದರೆ ಇದು ಮಳೆನೀರು ಹರಿಯುವ ಮ್ಯಾನ್‌ಹೋಲ್‌ ಚೇಂಬರ್‌ ಆಗಿದ್ದುದರಿಂದ ಸ್ಥಳೀಯ ಕಾರ್ಪೊರೇ ಟರ್‌ ಕದ್ರಿ ಮನೋಹರ್‌ ಶೆಟ್ಟಿ ಅವರೇ ಇಳಿದರು. ಮನೋಹರ್‌ ಶೆಟ್ಟಿ ಅವರಿಗೆ ಇತರ ಮೂರು ಮಂದಿ ಯುವಕರು ಕೂಡ ಸಹಕರಿಸಿ ದುರಸ್ತಿಪಡಿಸಿದರು ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next