Advertisement

ಶಕ್ತಿನಗರ: ಸೋಂಕು ನಿವಾರಕ ಔಷಧ ಸಿಂಪಡಣೆ

12:28 AM Apr 29, 2020 | Sriram |

ಮಂಗಳೂರು: ನಗರದ ಶಕ್ತಿನಗರ ನಿವಾಸಿಗಳಿಬ್ಬರಲ್ಲಿ ಕೋವಿಡ್-19 ಸೋಂಕು ದೃಢಗೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ಆ ಪರಿಸರದಲ್ಲಿ ಆರೋಗ್ಯ ಸಂಬಂಧಿ ಚಟುವಟಿಕೆಗಳನ್ನು ಕ್ಷಿಪ್ರಗೊಳಿಸಲಾಗಿದೆ.

Advertisement

ಸೋಂಕಿತರಿಬ್ಬರಿಗೂ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದರೂ ಮುಂಜಾಗೃತ ಕ್ರಮವಾಗಿ ಶಕ್ತಿ ನಗರ ವಲಯವನ್ನು ಸೀಲ್‌ಡೌನ್‌ ಮಾಡಲಾಗಿದೆ. ಇದೇ ವೇಳೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಂಗಳವಾರ ಈ ಪ್ರದೇಶದಲ್ಲಿ ಟ್ಯಾಂಕರ್‌ಗಳಲ್ಲಿ ಸೋಂಕು ನಿವಾರಕ ಔಷಧವನ್ನು ಸಿಂಪಡಿಸಲಾಯಿತು.

ಸೀಲ್‌ಡೌನ್‌
ಕಂಟೈನ್‌ಮೆಂಟ್‌ ವಲಯವಾಗಿ ಜಿಲ್ಲಾಧಿಕಾರಿಯಿಂದ ಘೋಷಿಸಲ್ಪಟ್ಟಿರುವ ಶಕ್ತಿನಗರದಲ್ಲಿನ ಕಕ್ಕೆಬೆಟ್ಟು ಪರಿಸರ ಸೀಲ್‌ಡೌನ್‌ ಆಗಿದ್ದು, ಈ ಪರಿಸರದ 22 ಮನೆಗಳು, 4 ಅಂಗಡಿಗಳು,1 ಕಚೇರಿ ಸೀಲ್‌ಡೌನ್‌ ಆಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next