Advertisement

ಭಾರೀ ಮಳೆ, ಭೂಕುಸಿತ ಮಂಗಳೂರು ಬೆಂಗಳೂರು ರೈಲು ಸಂಚಾರ ಸ್ಥಗಿತ

07:31 PM Aug 09, 2018 | Team Udayavani |

ಮಂಗಳೂರು/ಸುಬ್ರಹ್ಮಣ್ಯ: ಪಶ್ಚಿಮಘಟ್ಟ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಕಾರಣದಿಂದ ಸುಬ್ರಹ್ಮಣ್ಯ – ಸಕಲೇಶಪುರ ರೈಲ್ವೇ ಮಾರ್ಗ ಸಾಗುವ ಎಡಕುಮೇರಿ ಎಂಬಲ್ಲಿ ಭಾರೀ ಭೂಕುಸಿತವಾಗುತ್ತಿದ್ದು ಹಳಿಗಳ ಮೇಲೆ ನಿರಂತರವಾಗಿ ಮಣ್ಣು ಬೀಳುತ್ತಿರುವುದರಿಂದ ಈ ಭಾಗದ ಎಲ್ಲಾ ರೈಲು ಸೇವೆಗಳನ್ನು ಗುರುವಾರ ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.

Advertisement

ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ – ಮಂಗಳೂರು ಎಕ್ಸ್ ಪ್ರೆಸ್ (ರೈಲು ಸಂಖ್ಯೆ: 16575) ಮತ್ತು ಮಂಗಳೂರು ಸೆಂಟ್ರಲ್ – ಕಾರವಾರ (ರೈಲು ಸಂಖ್ಯೆ: 16513) ಇವುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೇ ಪ್ರಕಟನೆ ತಿಳಿಸಿದೆ. ಮಾತ್ರವಲ್ಲದೇ ನೈಋತ್ಯ ರೈಲ್ವೇ ತನ್ನ ಕೆ.ಎಸ್.ಆರ್. – ಮಂಗಳೂರು ಸೆಂಟ್ರಲ್ –ಕಣ್ಣೂರು ಎಕ್ಸ್ ಪ್ರೆಸ್ (ರೈಲು ಸಂಖ್ಯೆ: 16511) ಸಂಚಾರವನ್ನು ಆಂಶಿಕವಾಗಿ ರದ್ದುಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next