Advertisement

Mangaluru ಅನ್ಯಕೋಮಿನ ಯುವಕ, ಯುವತಿಯ ಮೇಲೆ ಹಲ್ಲೆಗೆ ಯತ್ನ

06:18 PM Jan 19, 2024 | Team Udayavani |

ಮಂಗಳೂರು: ನಗರದ ಕದ್ರಿ ಪಾರ್ಕ್ ಬಳಿ ಭಿನ್ನ ಕೋಮಿನ ಯುವಕ ಮತ್ತು ಯುವತಿಗೆ ಯುವಕರ ಗುಂಪೊಂದು ಹಲ್ಲೆಗೆ ಯತ್ನಿಸಿರುವ ಘಟನೆ ಶುಕ್ರವಾರ ನಡೆದಿದ್ದು ಘಟನೆಗೆ‌ ಸಂಬಂಧಿಸಿದಂತೆ ಪೊಲೀಸರು ಕೆಲವು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

Advertisement

ಬೆಳಗ್ಗೆ ದೇರಳಕಟ್ಟೆಯಿಂದ ಜ್ಯೋತಿ ಸರ್ಕಲ್ ಗೆ ಬಸ್ ನಲ್ಲಿ ಜತೆಯಾಗಿ ಬರುತ್ತಿದ್ದಾಗ ಹಿಂಬಾಲಿಸುತ್ತಾ ಬಂದಿದ್ದ ಯುವಕರು ಕದ್ರಿ ಪಾರ್ಕ್ ಬಳಿ ತಡೆದಿದ್ದಾರೆ. ಅನಂತರ ಯುವಕ ಯುವತಿ ಜತೆಯಾಗಿ ಆಟೋರಿಕ್ಷಾದಲ್ಲಿ ತೆರಳಲು ಮುಂದಾದಾಗ ತಡೆಯಲು ಯತ್ನಿಸಲಾಗಿದೆ. ಈ ವೇಳೆ ಪೊಲೀಸರು ಸ್ಥಳಕ್ಕಾಗಮಿಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next