Advertisement

ಮಂಗಳೂರು: ಬೀಚ್ ಕ್ಲೀನಿಂಗ್ ಮೂಲಕ ಹೊಸ ವರ್ಷಾರಂಭ ಮಾಡಿದ ಎಬಿವಿಪಿ

04:41 PM Jan 01, 2023 | Team Udayavani |

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಆಯಾಮಗಳಲ್ಲಿ ಒಂದಾದ ಸ್ಟೂಡೆಂಟ್ಸ್ ಫಾರ್ ಡೆವೆಲಪ್ ಮೆಂಟ್ (SFD) ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ಮಂಗಳೂರಿನ ತಣ್ಣಿರು ಬಾವಿ ಬೀಚ್ ನಲ್ಲಿ ಜನವರಿ
01 ಆದಿತ್ಯವಾರ ನಡೆಯಿತು.

Advertisement

ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಎಸ್ ಎಫ್ ಡಿ ಮಂಗಳೂರು ವಿಭಾಗ ಸಂಚಾಲಕರಾದ ನಿಶಾನ್ ಆಳ್ವ ಕಾವೂರು, ಎಬಿವಿಪಿ ಮಂಗಳೂರು ತಾಲೂಕು ಸಂಚಾಲಕರಾದ ಆದರ್ಶ ಉಪ್ಪಾರ್ , ನಗರ ಎಸ್ ಎಫ್ ಡಿ ಪ್ರಮುಖರಾದ ನಿಶ್ಚಿತ್ ಬಂಟ್ವಾಳ್, ಪ್ರ ಸ್ಕಂದ ಕಿರಣ್ , ಭವನಿಶ್ ಶೆಟ್ಟಿ , ಅಭಿನಯ ಮತ್ತು ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಾದರಿ ಕಾರ್ಯದ ಮೂಲಕ ಹೊಸ ವರ್ಷಾಚರಣೆ ನಡೆಸಿದ್ದು ಎಲ್ಲರ ಪ್ರಶಂಸೆಗೆ ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next