Advertisement

Mangalore: ರಸ್ತೆ ಗುಂಡಿಗೆ ಬೈಕ್‌ ಸಮೇತ ಬಿದ್ದ ಸವಾರ

01:16 AM Nov 06, 2023 | Team Udayavani |

ಮಂಗಳೂರು: ನಗರದ ವೆಲೆನ್ಸಿಯ ಬಳಿ ಕಾಮಗಾರಿ ಉದ್ದೇಶಕ್ಕೆ ಕಾಂಕ್ರಿಟ್‌ ರಸ್ತೆಯಲ್ಲಿ ತೋಡಿದ್ದ ಗುಂಡಿಗೆ ಬೈಕ್‌ ಸಮೇತ ಸವಾರ ಬಿದ್ದು ಗಾಯಗೊಂಡ ಘಟನೆ ರವಿವಾರ ಸಂಜೆ ನಡೆದಿದೆ.
ವೆಲೆನ್ಸಿಯದಿಂದ ನಂದಿಗುಡ್ಡೆಗೆ ಬರುವ ರಸ್ತೆಯಲ್ಲಿ ನೀರಿನ ಪೈಪ್‌ಲೈನ್‌ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಕಾಂಕ್ರಿಟ್‌ ರಸ್ತೆಯಲ್ಲಿ ಬೃಹತ್‌ ಗುಂಡಿ ತೆಗೆಯಲಾಗಿದೆ. ಇಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸದೇ ಇರುವ ಕಾರಣ ಬೈಕ್‌ ಸವಾರ ಗುಂಡಿಗೆ ಬಿದ್ದಿದ್ದಾರೆ. ಈ ವೇಳೆ ಮಳೆಯೂ ಸುರಿಯುತ್ತಿತ್ತು. ತತ್‌ಕ್ಷಣ ಸ್ಥಳೀಯರು ಸವಾರನನ್ನು ಗುಂಡಿಯಿಂದ ಹೊರತೆಗೆದು ಉಪಚರಿಸಿದರು. ಈ ಗುಂಡಿ ರಸ್ತೆಯ ಮಧ್ಯ ಭಾಗದಲ್ಲಿದ್ದು, ಸುತ್ತ ಯಾವುದೇ ಬ್ಯಾರಿಕೇಡ್‌ ಅಳವಡಿಸಿಲ್ಲ. ಸ್ಥಳೀಯರು ತತ್‌ಕ್ಷಣ ಪಾಲಿಕೆ ಮೇಯರ್‌ ಅವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ.

Advertisement

ಕೆಲವು ವಾಹನದವರದ್ದೇ ನಿರ್ಲಕ್ಷ್ಯ: ಮೇಯರ್‌
ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅವರು ಉದಯವಾಣಿಗೆ ಪ್ರತಿಕ್ರಿಯಿಸಿ, ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಆದರೆ ಕೆಲವು ವಾಹನದವರು ಬ್ಯಾರಿಕೇಡ್‌ ಸರಿಸಿ ಹೋಗಿದ್ದು, ಇದೇ ಅವಘಡಕ್ಕೆ ಕಾರಣವಾಗಿದೆ. ಗಾಯಾಳುವಿನ ಆಸ್ಪತ್ರೆ ವೆಚ್ಚವನ್ನು ಗುತ್ತಿಗೆದಾರನೇ ಭರಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next