Advertisement

ಸಿಐಡಿಗೆ ತನಿಖೆಗೆ ಕೊಡೋಕೆ ಮುಖ್ಯಮಂತ್ರಿ ಏನು ಪ್ರತ್ಯಕ್ಷದರ್ಶಿಯಾ: ಸಿದ್ದರಾಮಯ್ಯ

03:51 PM Dec 23, 2019 | Team Udayavani |

ಮಂಗಳೂರು: ಮುಖ್ಯಮಂತ್ರಿಯವರೇ ಪ್ರಕರಣದ ತನಿಖೆಗೆ ಸರ್ಟಿಫಿಕೇಟ್ ಕೊಡುತ್ತಾರೆ, ಮುಖ್ಯಮಂತ್ರಿಯವರೇ ಪೊಲೀಸರಿಗೆ ಸರ್ಟಿಫಿಕೇಟ್ ಕೊಡುತ್ತಾರೆ, ಸಿಐಡಿಗೆ ತನಿಖೆಗೆ ಕೊಡುವುದಕ್ಕೆ ಮುಖ್ಯಮಂತ್ರಿ ಏನು ಪ್ರತ್ಯಕ್ಷದರ್ಶಿಯಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಮಂಗಳೂರು ಫೈರಿಂಗ್ ಪ್ರಕರಣವನ್ನು ಸಿಐಡಿ ತನಿಖೆ ನೀಡಿದ ವಿಚಾರವಾಗಿ ಅವರು ಸೋಮವಾರದಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಫೈರಿಂಗ್ ಮಾಡಿರೋರು ಯಾರು ಪೊಲೀಸರು, ಸಿಐಡಿಯಲ್ಲಿ ತನಿಖೆ ಮಾಡಿರೋರು ಯಾರು ಪೊಲೀಸರೇ, ಅದಕ್ಕೆ ನಾನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೇನೆ ಎಂದು ಹೇಳಿದರು.

ನಂತರ ಸಿದ್ದರಾಮಯ್ಯರವರು ಪೊಲೀಸ್ ಗುಂಡೇಟಿಗೆ ಬಲಿಯಾದವರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿ ಅವರ ನೇತೃತ್ವದಲ್ಲಿ ತಲಾ 5 ಲಕ್ಷ ರೂಪಾಯಿ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್‌ನಿಂದ ತಲಾ  2.5 ಲಕ್ಷ ರೂಪಾಯಿಯ ಚೆಕ್ ಅನ್ನು ಹಸ್ತಾಂತರ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next