Advertisement

ಅಂಕೋಲಾ ಬಸ್ ಸ್ಟ್ಯಾಂಡ್ ಶೌಚಾಲಯದಲ್ಲಿ ಒಂದೂವರೆ ಗಂಟೆ ಮಲಗಿದ ಮಂಗಳೂರಿನ ವ್ಯಕ್ತಿ

09:45 AM Mar 03, 2022 | Team Udayavani |

ಅಂಕೋಲಾ: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ತಾಲೂಕಿನ ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ಸ್ಟಾಂಡ್ ಹಿಂಬದಿಯಲ್ಲಿರುವ ಶೌಚಾಲಯದ ಒಳಗಡೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿದ್ದ ಘಟನೆ ಅಂಕೋಲಾ ಬಸ್ ನಿಲ್ದಣದಲ್ಲಿ‌ ನಡೆದಿದೆ.

Advertisement

ನೂತನವಾಗಿ ನಿರ್ಮಾಣವಾಗಿರುವ ಅಂಕೋಲಾ ಬಸ್ ನಿಲ್ದಾಣದ ಹಿಂಬದಿಯಲ್ಲಿ ಇರುವ ಶೌಚಾಲಯದ ಕೋಣೆಯೊಂದಕ್ಕೆ ಪ್ರವೇಶಿಸಿದ ವ್ಯಕ್ತಿ ಒಳಡೆಯಿಂದ ಚಿಲಕ ಹಾಕಿಕೊಂಡಿದ್ದ.

ಒಳಗೆ ಹೋದ ವ್ಯಕ್ತಿ ಸುಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ಹೊರಗಡೆ ಬರದೇ ಇದ್ದರಿಂದ ಶೌಚಾಲಯದ ನಿರ್ವಹಣಾ ಸಿಬ್ಬಂದಿ ಕದ ತಟ್ಟಿದರೂ ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಹಿಂಬದಿಯಲ್ಲಿ ಇರುವ ಸಣ್ಣ ಕಿಂಡಿಯಲ್ಲಿ ಮೊಬೈಲ್ ತೂರಿಸಿ ವಿಡಿಯೋ ಚಿತ್ರೀಕರಣ ಮಾಡಿದಾಗ ಒಳಗಡೆ ಆ ವ್ಯಕ್ತಿ ಸತ್ತು ಬಿದ್ದ ರೀತಿಯಲ್ಲಿ ಬಿದ್ದುಕೊಂಡಿರುವುದು ಕಂಡು ಬಂದಿದೆ.

ಇದರಿಂದ ಆತಂಕಗೊಂಡ ನಿರ್ವಹಣಾ ಸಿಬ್ಬಂದಿ ವಿಷಯವನ್ನು ಬಸ್ ನಿಲ್ದಾಣದ ನಿಯಂತ್ರಕರ ಗಮನಕ್ಕೆ ತಂದಿದ್ದಾನೆ. ತಕ್ಷಣ ಬಸ್ ನಿಲ್ದಾಣದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬಾಗಿಲು ಬಡಿದರೂ ಒಳಗಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದ ಕಾರಣ ಅಂಕೋಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲಿನ ಶೀಟ್ ಒಡೆದ ಭಾಗದಿಂದ ಕೈ ತೂರಿಸಿ ಬಾಗಿಲು ತೆರೆದು  ನೋಡಿದಾಗ ಒಳಗೆ ಬಿದ್ದಿರುವ ವ್ಯಕ್ತಿಯನ್ನು ಕಂಡು ಒಂದು ಕ್ಷಣ ಆತ ಮೃತ ಪಟ್ಟಿರಬಹುದು ಎಂದು ಎಲ್ಲರೂ ಭಯಗೊಂಡಿದ್ದಾರೆ.

ಇದನ್ನೂ ಓದಿ:ಶತಮಾನದ ಅತೀ ದೊಡ್ಡ ವಲಸೆ!: ಒಂದೇ ವಾರದಲ್ಲಿ ಉಕ್ರೇನ್ ತೊರೆದ ಒಂದು ಮಿಲಿಯನ್ ಜನರು!

Advertisement

ಆದರೆ ವ್ಯಕ್ತಿ ಉಸಿರಾಡುತ್ತಿರುವುದನ್ನು ಗಮನಿಸಿ ತಟ್ಟಿ ಎಬ್ಬಿಸಿದಾಗ ವ್ಯಕ್ತಿ ಅಸ್ವಸ್ಥ ಆಗಿರುವ ರೀತಿಯಲ್ಲಿ ಎದ್ದು ಕುಳಿತಿರುವುದಾಗಿ ತಿಳಿದು ಬಂದಿದೆ.

ವ್ಯಕ್ತಿಯ ಕುರಿತು ವಿಚಾರಣೆ ನಡೆಸಿದಾಗ ಆತ ಮಂಗಳೂರಿನ ಕಾಪು ಮೂಲದವನಾಗಿದ್ದು ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ರಸ್ತೆಯಲ್ಲಿ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈತನ ಕುಡಿತದ ಚಟದಿಂದ ಬೇಸತ್ತು ಹೊಟೇಲ್ ಮಾಲಿಕರು ಕೆಲಸದಿಂದ ತೆಗೆದು ಹಾಕಿದ್ದರು ಎನ್ನುವ ಮಾಹಿತಿ ದೊರಕಿದ್ದು ಬೆಳಿಗ್ಗೆ ಕುಡಿದ ಮತ್ತಿನಲ್ಲಿ ಮತ್ತು ನಿದ್ರೆಯ ಮಂಪರಿನಲ್ಲಿದ್ದ ಕಾರಣ ಶೌಚಾಲಯದಲ್ಲಿ ಮಲಗಿರುವದಾಗಿ ತಿಳಿದು ಬಂದಿದ್ದು, ನಂತರ ಬಸ್ ಮೂಲಕ ಊರಿಗೆ ತೆರಳಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next