Advertisement

ಮಂಗಳೂರು ಪ್ರಕರಣ: ನಗರದ ಜನನಿಬಿಡ ಪ್ರದೇಶಗಳಲ್ಲಿ ನಿಗಾ ಹೆಚ್ಚಳ

11:45 PM Dec 14, 2022 | Team Udayavani |

ಮಂಗಳೂರು: ಮಂಗಳೂರು ನಗರದ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸ್‌ ನಿಗಾ ಹೆಚ್ಚಿಸಲಾಗಿದೆ. ಬುಧವಾರ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಸೇರಿದಂತೆ ಹಲವೆಡೆ ಶ್ವಾನದಳದ ಮೂಲಕ ಬಾಂಬ್‌ ಪತ್ತೆ ಕಾರ್ಯಾಚರಣೆ ನಡೆಯಿತು.

Advertisement

ಕೈಗಾರಿಕೆ, ಬಂದರು, ವಿಮಾನ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಪ್ರಮುಖ ಸೂಕ್ಷ್ಮ ಸ್ಥಳಗಳಲ್ಲಿ ಶ್ವಾನದಳದ ಸಹಾಯದೊಂದಿಗೆ ತಪಾಸಣೆ ನಡೆಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ನ. 19ರಂದು ಕುಕ್ಕರ್‌ಬಾಂಬ್‌ ಸ್ಫೋಟಗೊಂಡ ಬಳಿಕವೂ ನಗರದಲ್ಲಿ ಭದ್ರತೆ, ತಪಾಸಣೆ ಬಿಗಿಯಾಗದ ಬಗ್ಗೆ ನ. 30ರಂದು “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next