Advertisement

Train ಮಂಗಳೂರು – ಬೆಂಗಳೂರು ರೈಲು ಮಾರ್ಗ: ಭರದಿಂದ ಸಾಗುತ್ತಿದೆ ಮಣ್ಣು ತೆರವು

01:07 AM Aug 19, 2024 | Team Udayavani |

ಸುಬ್ರಹ್ಮಣ್ಯ: ಮಂಗಳೂರು – ಬೆಂಗಳೂರು ರೈಲು ಮಾರ್ಗದ ಸಕಲೇಶಪುರ – ಬಳ್ಳುಪೇಟೆ ರೈಲು ನಿಲ್ದಾಣದ ನಡುವಿನ ಸಕಲೇಶಪುರ ಸಮೀಪ ರೈಲು ಮಾರ್ಗಕ್ಕೆ ಮತ್ತೆ ಗುಡ್ಡ ಕುಸಿತಗೊಂಡಿರುವ ಮಣ್ಣನ್ನು ತೆರವು ಮಾಡುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

Advertisement

ವಾರದ ಹಿಂದೆ ಗುಡ್ಡ ಕುಸಿದ ಪ್ರದೇಶದಲ್ಲೇ ಶುಕ್ರವಾರ ಮತ್ತೆ ಮಣ್ಣು ಕುಸಿದಿರುವ ಮತ್ತೆ ರೈಲು ಸಂಚಾರ ಸ್ಥಗಿತ ಮಾಡಲಾಗಿದೆ. ಕಳೆದ 3 ದಿನಗಳಿಂದ ಮಣ್ಣು ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, 4-5 ಹಿಟಾಚಿ ಸಹಾಯದಿಂದ ಮಣ್ಣು ತೆರವು ನಡೆಯುತ್ತಿದೆ. ಗುಡ್ಡ ಮೇಲ್ಭಾಗದಿಂದ ಕುಸಿಯುವ ಭೀತಿಯ ಮಣ್ಣನ್ನು ತೆರವು ಮಾಡಲಾಗುತ್ತಿದೆ. ಆದರೂ ಮಣ್ಣು ಕುಸಿಯುತ್ತಿದ್ದು ರೈಲು ಮಾರ್ಗದಲ್ಲಿ ಕೆಸರು ಮಿಶ್ರಿತ ಮಣ್ಣು ತುಂಬಿದೆ. ಅದನ್ನು ತೆರವು ಮಾಡಲಾಗುತ್ತಿದೆ. ಜತೆಗೆ ಮಣ್ಣು ಕುಸಿಯದಂತೆ ತಡೆ ಗೋಡೆ ನಿರ್ಮಾಣಕ್ಕೂ ಸಿದ್ಧತೆ ನಡೆಯುತ್ತಿದೆ.

ಆ ಭಾಗದಲ್ಲಿ ಮಣ್ಣು ಸಡಿಲವಾಗಿರು ವುದರಿಂದ ಸವಾಲಿನ ಸ್ಥಿತಿ ಇದೆ. ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು ಹಾಗೂ ಇನ್ನೂ ಅಲ್ಲಿ ಕುಸಿಯುವ ಭೀತಿ ಇರುವುದರಿಂದ ರೈಲು ಮಾರ್ಗದ ದುರಸ್ತಿ ಹಾಗೂ ಮಣ್ಣು ತೆರವಿಗೆ ಇನ್ನೂ ಕೆಲ ದಿನ ಹಿಡಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next