Advertisement

ಮಂಗಳೂರು: ಮೊಬೈಲ್‌ನಲ್ಲಿ ಜೋರಾಗಿ ಮಾತನಾಡಿದ್ದಕ್ಕೆ ಸಹೋದರರ ಮೇಲೆ ಹಲ್ಲೆ

01:35 PM May 08, 2020 | mahesh |

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಸಹೋದರರ ಮೇಲೆ ತಂಡವೊಂದು ಬುಧವಾರ ರಾತ್ರಿ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಬಗ್ಗೆ ನಗರದ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸುರತ್ಕಲ್‌ ಇಡ್ಯ ನಿವಾಸಿಗಳಾದ ಕಾರ್ತಿಕ್‌ ಶೆಟ್ಟಿ (24) ಮತ್ತು ಭರತ್‌ ಶೆಟ್ಟಿ (22) ಹಲ್ಲೆಗೊಳಗಾದವರು. ಆರೋಪಿಗಳಾದ ರಾಹುಲ್‌, ಚರಣ್‌ ಹಾಗೂ ಇತರ ಮೂವರು ಹಲ್ಲೆ ನಡೆಸಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಕಾರ್ತಿಕ್‌ ಬುಧವಾರ ರಾತ್ರಿ 10:30 ರ ವೇಳೆಗೆ ತನ್ನ ತಮ್ಮ ಭರತ್‌ ಶೆಟ್ಟಿ ಜತೆಗೆ ಹೊಯ್ಗೆ ಬಜಾರ್‌ ಕಡೆ ಯಿಂದ ದಕ್ಕೆಯತ್ತ ದ್ವಿಚಕ್ರ ವಾಹನ ದಲ್ಲಿ ತೆರಳುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ. ಹೊಯ್ಗೆ ಬಜಾರ್‌ನ ಭಗತ್‌ ಸಿಂಗ್‌ ರಸ್ತೆ ತಲುಪಿದಾಗ ಕಾರ್ತಿಕ್‌ ಮೊಬೈಲ್‌ಗೆ ಕರೆಯೊಂದು ಬಂದಿದ್ದು, ಅವರು ಕರೆ ಸ್ವೀಕರಿಸಿ ಮಾತನಾಡಲು ಆರಂಭಿಸಿದ್ದರು. ಅಷ್ಟರಲ್ಲಿ ಬೈಕಿನಲ್ಲಿ ಬಂದ ಆರೋಪಿ ರಾಹುಲ್‌ ಹಾಗೂ ಇನ್ನೋರ್ವ ವ್ಯಕ್ತಿ ಕಾರ್ತಿಕ್‌ ಜೋರಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದನ್ನು ಆಕ್ಷೇಪಿಸಿ ಬೈಯ್ದು ಹೋದರೆನ್ನಲಾಗಿದೆ. ಬಳಿಕ 10 ನಿಮಿಷಗಳ ಬಳಿಕ ಆರೋಪಿ ಗಳಾದ ರಾಹುಲ್‌, ಚರಣ್‌ ಹಾಗೂ ಇತರ ಮೂವರು ಎರಡು ಬೈಕ್‌ಗಳಲ್ಲಿ ಬಂದು ಕಾರ್ತಿಕ್‌ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿದೆ.

ತಡೆಯಲೆತ್ನಿಸಿದ ಭರತ್‌ ಮೇಲೂ ತಂಡ ಚೂರಿಯಿಂದ ದಾಳಿ ನಡೆಸಿ ದ್ದಲ್ಲದೆ, ಇಬ್ಬರಿಗೂ ಜೀವ ಬೆದರಿಕೆ ಹಾಕಿ ತೆರಳಿದೆ ಎನ್ನಲಾಗಿದೆ. ಚೂರಿ ಇರಿತದಿಂದ ಗಾಯಗೊಂಡ ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಕಾರ್ತಿಕ್‌ ನೀಡಿರುವ ದೂರಿನಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next