Advertisement

Mandya; ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಟ್ರಾಫಿಕ್ ಪೊಲೀಸರು

03:29 PM Feb 03, 2024 | Team Udayavani |

ಮಂಡ್ಯ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಟ್ರಾಫಿಕ್ ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಡ್ಯದ ಟ್ರಾಫಿಕ್ ಠಾಣೆಯಲ್ಲಿ ನಡೆದಿದೆ.

Advertisement

ಮಂಡ್ಯ ಟ್ರಾಫಿಕ್ ಠಾಣೆಯ ಕುಮಾರ್ ಮತ್ತು ಮಹದೇವು ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸರು. ಇವರು ಸಯ್ಯದ್ ಪಾಷ ಎಂಬುವವರ ಬಳಿ 8 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.

ಜನವರಿ 25 ರಂದು ಸಯ್ಯದ್ ಪಾಷ ಬೈಕ್ ಅಪಘಾತವಾಗಿತ್ತು. ಇದರ ಬಳಿಕ ಮಂಡ್ಯ ಟ್ರಾಫಿಕ್ ಪೊಲೀಸರು ಬೈಕ್ ಸೀಝ್ ಮಾಡಿದ್ದರು. ತನಿಖೆ ನಂತರ ಬೈಕ್ ಬಿಡುಗಡೆ ಮಾಡಲು ಈ ಇಬ್ಬರು ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಸಯ್ಯದ್ ಪಾಷ ಅವರು ನಂತರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲಂಚ ಪಡೆಯುವಾಗ ಟ್ರಾಫಿಕ್ ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next