Advertisement

ಮಂಡ್ಯ:ಮಾಜಿ ಶಾಸಕನ ಬೆಂಬಲಿಗನ ಬರ್ಬರ ಹತ್ಯೆ 

02:04 PM Nov 29, 2017 | Team Udayavani |

ಮದ್ದೂರು: ಇಲ್ಲಿ ಕೌಡ್ಲೆ ಕೊಪ್ಪಲುವಿನಲ್ಲಿ  ಬುಧವಾರ ಹಾಡಹಗಲೇ  ಯುವಕನೊಬ್ಬನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. 

Advertisement

ಹತ್ಯೆಗೀಡಾದ ಯುವಕ ಕೌಡ್ಲೆ ಸಂತೋಷ್‌(25) ಎಂದು ತಿಳಿದು ಬಂದಿದ್ದು, ಮಾಜಿ ಶಾಸಕ,ಜೆಡಿಎಸ್‌ ಮುಖಂಡ   ಸುರೇಶ್‌ ಗೌಡ ಅವರ ಬೆಂಬಲಿಗ ಎಂದು ವರದಿಯಾಗಿದೆ.

ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿಬಂದ ನಾಲ್ವರು ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ. ಸಂತೋಷ್‌ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕೊಪ್ಪ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next