Advertisement

ಮಂಡ್ಯ ಜಿಲ್ಲೆಯಲ್ಲಿ 241 ಮಂದಿಗೆ ಸೋಂಕು; 186 ಮಂದಿ ಚೇತರಿಕೆ, ವೃದ್ಧೆ ಸಾವು

07:21 PM Oct 11, 2020 | sudhir |

ಮಂಡ್ಯ: ಜಿಲ್ಲೆಯಲ್ಲಿ ಮತ್ತೊಬ್ಬ ವೃದ್ಧೆ ಕೊರೊನಾದಿಂದ ಮೃತಪಟ್ಟಿದ್ದು, ಇದರಿಂದ ಸಾವಿನ ಸಂಖ್ಯೆ 121ಕ್ಕೇರಿದೆ. ಭಾನುವಾರ 241 ಮಂದಿಗೆ ಸೋಂಕು ಆವರಿಸಿದ್ದು, 186 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.

Advertisement

ಪಾಂಡವಪುರ ತಾಲ್ಲೂಕಿನ 70 ವರ್ಷದ ವೃದ್ಧೆಯೊಬ್ಬರು ಕೊರೊನಾ, ನ್ಯುಮೋನಿಯಾ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

241 ಹೊಸ ಸೋಂಕು:
ಭಾನುವಾರ ಜಿಲ್ಲೆಯಲ್ಲಿ 241 ಮಂದಿಗೆ ಸೋಂಕು ಆವರಿಸಿದೆ. ಮಂಡ್ಯ 102, ಮದ್ದೂರು 23, ಮಳವಳ್ಳಿ 19, ಪಾಂಡವಪುರ 15, ಶ್ರೀರಂಗಪಟ್ಟಣ 27, ಕೆ.ಆರ್.ಪೇಟೆ 32 ಹಾಗೂ ನಾಗಮಂಗಲ 18 ಮಂದಿ ಸೇರಿದ್ದಾರೆ. ಹೊರ ಜಿಲ್ಲೆಯ 5 ಮಂದಿ ಸೋಂಕಿತರು ಮಂಡ್ಯದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13560ಕ್ಕೇರಿದೆ.

1100 ಮಂದಿಗೆ ಪರೀಕ್ಷೆ: ರ‍್ಯಾಪಿಡ್ 474 ಹಾಗೂ ಆರ್‌ಟಿಪಿಸಿಆರ್ 626 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1100 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.

ಇದನ್ನೂ ಓದಿ:ಮಲಪ್ರಭ ನದಿಯಲ್ಲಿ ಕೊಚ್ಚಿಹೋದ ರೈತ : ದೇಹ ಪತ್ತೆಗೆ ರಕ್ಷಣಾ ತಂಡದಿಂದ ಕಾರ್ಯಾಚರಣೆ

Advertisement

186 ಚೇತರಿಕೆ:
ಮಂಡ್ಯ 47, ಮದ್ದೂರು 37, ಮಳವಳ್ಳಿ 20, ಪಾಂಡವಪುರ 40, ಶ್ರೀರಂಗಪಟ್ಟಣ 4, ಕೆ.ಆರ್.ಪೇಟೆ 21 ಹಾಗೂ ನಾಗಮಂಗಲದ 19 ಮಂದಿ ಸೇರಿದಂತೆ ಒಟ್ಟು 186 ಮಂದಿ ಚೇತರಿಸಿಕೊಂಡಿದ್ದಾರೆ. ಇದುವರೆಗೂ 11635 ಮಂದಿ ಬಿಡುಗಡೆಯಾಗಿದ್ದಾರೆ.

1804 ಸಕ್ರಿಯ ಪ್ರಕರಣಗಳು:
ಜಿಲ್ಲೆಯಲ್ಲಿ 1804 ಸಕ್ರಿಯ ಪ್ರಕರಣಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ 481, ಖಾಸಗಿ ಆಸ್ಪತ್ರೆಗಳಲ್ಲಿ 145, ಕೋವಿಡ್ ಕೇರ್ ಸೆಂಟರ್‌ನಲ್ಲಿ 195 ಹಾಗೂ ಮನೆಗಳಲ್ಲಿ 983 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next