ಮಂಡ್ಯ: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ದಾಖಲೆಯ 412 ಮಂದಿ ಕೋವಿಡ್ ನಿಂದ ಮುಕ್ತರಾಗಿದ್ದಾರೆ ಇಬ್ಬರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ, ಹೊಸ 93 ಪ್ರಕರಣಗಳು ದೃಢಪಟ್ಟಿವೆ ಇದರೊಂದಿಗೆ ಸೋಂಕಿತರ ಸಂಖ್ಯೆ 9 ಸಾವಿರದ ಗಡಿಯತ್ತ ಸಾಗಿದೆ.
ಕೆ.ಆರ್.ಪೇಟೆ ತಾಲ್ಲೂಕಿನ 60 ಹಾಗೂ 65 ವರ್ಷದ ವೃದ್ಧರಿಬ್ಬರು ಕೋವಿಡ್, ನ್ಯುಮೋನಿಯಾ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 92ಕ್ಕೇರಿದೆ.
412 ಮಂದಿ ಕೋವಿಡ್ ಮುಕ್ತ:
ಶನಿವಾರ ಜಿಲ್ಲೆಯಲ್ಲಿ 412 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮಂಡ್ಯ 160, ಮದ್ದೂರು 6, ಮಳವಳ್ಳಿ 74, ಶ್ರೀರಂಗಪಟ್ಟಣ 13, ಕೆ.ಆರ್.ಪೇಟೆ 142, ನಾಗಮಂಗಲ 9 ಹಾಗೂ ಹೊರ ಜಿಲ್ಲೆಯ 8 ಮಂದಿ ಕೋವಿಡ್ ಮುಕ್ತರಾಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 7331 ಜನರು ಕೊರೊನಾದಿಂದ ಬಿಡುಗಡೆಯಾದರೆ 1574 ಸಕ್ರಿಯ ಪ್ರಕರಣಗಳಿವೆ.
93 ಮಂದಿಗೆ ಕೋವಿಡ್ ಸೋಂಕು ದೃಢ
ಮಂಡ್ಯ 39, ಮದ್ದೂರು 7, ಮಳವಳ್ಳಿ 8, ಪಾಂಡವಪುರ 6, ಶ್ರೀರಂಗಪಟ್ಟಣ 9, ಕೆ.ಆರ್.ಪೇಟೆ ಹಾಗೂ ನಾಗಮಂಗಲದಲ್ಲಿ ತಲಾ 12 ಮಂದಿಗೆ ಶನಿವಾರ ಸೋಂಕು ಅಟ್ಯಾಕ್ ಮಾಡಿದೆ. ಇದರಿಂದ ಜಿಲ್ಲೆಯಲ್ಲಿ 8997 ಸೋಂಕು ಪ್ರಕರಣಗಳು ದಾಖಲಾಗಿವೆ.
Related Articles
1515 ಮಂದಿಗೆ ಪರೀಕ್ಷೆ:
ಶನಿವಾರ 1515 ಮಂದಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. 566 ರ್ಯಾಪಿಡ್ ಹಾಗೂ 949 ಆರ್ಟಿಪಿಸಿಆರ್ ಪರೀಕ್ಷೆಗೊಳಗಾಗಿದ್ದರು. ಜಿಲ್ಲೆಯ ಸರ್ಕಾರ ಆಸ್ಪತ್ರೆಗಳ ಐಸೋಲೇಷನ್ನಲ್ಲಿ 373, ಖಾಸಗಿ ಆಸ್ಪತ್ರೆಗಳ ಐಸೋಲೇಷನ್ನಲ್ಲಿ 92, ಕೋವಿಡ್ ಕೇರ್ ಸೆಂಟರ್ಗಳಲ್ಲಿ 73 ಹಾಗೂ ಹೋಂ ಐಸೋಲೇಷನ್ನಲ್ಲಿ 1036 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದ್ದಾರೆ.