Advertisement

ಎಲ್ಲರ ಮನಸ್ಸು  ಮಗುವಿನ ಮನಸ್ಸಾಗಲಿ: ರೈ

03:45 AM Feb 18, 2017 | Team Udayavani |

ಪುತ್ತೂರು: ದ್ವೇಷ ಇಲ್ಲದ, ಸ್ವಾರ್ಥಧಿರಹಿತ, ಜಾತಿ-ಮತ-ಧರ್ಮದ ಭೇದ ಭಾವ ಇಲ್ಲದ ಮಕ್ಕಳ ಮನಸ್ಸು ದೇವರಿಗೆ ಸಮಾನ. ಹಾಗಾಗಿ ಪ್ರತಿಯೊಬ್ಬರ ಮನಸ್ಸು ಮಗುವಿನ ಮನಸ್ಸಾಗಲಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲವಿಕಾಸ ಅಕಾಡೆಮಿ ಜಿಲ್ಲಾ ಕಾರ್ಯಾನುಧಿಷ್ಠಾನ ಸಮಿತಿ, ಡಾ| ಶಿವರಾಮ ಕಾರಂತ ಬಾಲವನ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಇತರ ಇಲಾಖೆಗಳ ಜಂಟಿ ಆಶ್ರಯದಲ್ಲಿ ಪರ್ಲಡ್ಕ ಬಾಲವನದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಮಕ್ಕಳ ಹಬ್ಬ ಉದ್ಘಾಟಿಸಿ ಮಾತನಾಡಿದರು.

ಭಾಷಣದಲ್ಲಿ ಸಾಮರಸ್ಯ, ನಿಸ್ವಾರ್ಥ, ಪರಸ್ಪರ ನಂಬಿಕೆ ಮೊದಲಾದವುಗಳ ಬಗ್ಗೆ ತಾಸುಗಟ್ಟಲೇ ಉಲ್ಲೇಖೀಸುತ್ತೇವೆ. ವೇದಿಕೆ ಇಳಿದ ಮೇಲೆ ಅದನ್ನು ಮರೆತು ಬಿಡುತ್ತೇವೆ. ಆದರೆ ಮಕ್ಕಳು ಹಾಗಲ್ಲ. ಆ ಮನಸ್ಸಿನಲ್ಲಿ ಪರಿಶುದ್ಧತೆ ಭಾವ ಸದಾ ಕಾಲ ತುಂಬಿರುತ್ತದೆ. ಮಕ್ಕಳು ಬೆಳೆಯುತ್ತಿದ್ದಂತೆ ಮನೆ-ಧಿಮಂದಿ, ಸಮಾಜ ದ್ವೇಷ, ಸ್ವಾರ್ಥ, ಜಾತಿ ಭಾವನೆ ತುಂಬಿ ಮನಸ್ಸನ್ನು ಹಾಳುಗೆಡುಹುತ್ತಾರೆ ಎಂದು ಅವರು ವಿಷಾದಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾಮಾಜಿಕ ಬಲಾಡ್ಯ ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿದೆ. ಅಂಗನವಾಡಿ ಕೇಂದ್ರದಲ್ಲಿ ಸಮಗ್ರ ಬಾಲ ವಿಕಾಸದಡಿ ಮಕ್ಕಳ ಸರ್ವತೋಮುಖ ಬೆಳ ವಣಿಗೆಗೆ ಕಾರ್ಯಕ್ರಮ ಅನುಷ್ಠಾನಿಸಿದೆ ಎಂದರು.

ದಶಕಗಳ ಹಿಂದೆ ಶಿಶು ಮರಣ, ಗರ್ಭಿಣಿ ಮರಣ ಪ್ರಕರಣ ಹೆಚ್ಚಾಗಿತ್ತು. ಸರಕಾರ ಜನನಿ ಸುರಕ್ಷಾ ಮತ್ತು ಜನನಿ ಶಿಶು ಸುರಕ್ಷಾ ಯೋಜನೆಯಡಿ ಪೌಷ್ಟಿಕ ಆಹಾರ ನೀಡಿ, ಮರಣ ಪ್ರಮಾಣವನ್ನು ತಡೆಧಿಗಟ್ಟಿದೆ. ಇಪ್ಪತ್ತು ವರ್ಷಗಳ ಹಿಂದೆ ಕಡು ಬಡತನಧಿದಲ್ಲಿ ಶಾಲೆಗೆ ಬರುತ್ತಿದ್ದ ಮಕ್ಕಳನ್ನು ಈಗ ಕಾಣುವುದು ಅಪರೂಪ. ಸಾಮಾಜಿಕ ವ್ಯವಸ್ಥೆಯಲ್ಲಿ ಆದ ಆಮೂಲಾಗ್ರ ಬದಲಾವಣೆ ಇದಕ್ಕೆ ಕಾರಣ ಎಂದು ರಮಾನಾಥ ರೈ ಹೇಳಿದರು.

Advertisement

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತಧಿನಾಡಿ, ಮಕ್ಕಳ ಪ್ರತಿಭೆಗೆ ತಕ್ಕಂತೆ ಅವಕಾಶ ಸೃಷ್ಟಿಸಿಧಿದಾಗ ಅವರ ಪ್ರತಿಭೆ ಉಜ್ವಲವಾಗಿ ಬೆಳವಣಿಗೆ ಹೊಂದುತ್ತದೆ ಎಂದರು.

ಶಾಸಕಿ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.  ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭೆ ಅಧ್ಯಕ್ಷೆ ಜಯಂತಿ ಬಲಾ°ಡು, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನಗರಸಭೆ ಸದಸ್ಯೆ ಜಯಲಕ್ಷ್ಮೀ ಸುರೇಶ್‌, ಉಪವಿಭಾಗಧಿಕಾರಿ ರಘುನಂದನ್‌ ಮೂರ್ತಿ, ಪ್ರಭಾರ ತಹಶೀಲ್ದಾರ್‌ ಗಾರ್ಗಿ ಜೈನ್‌, ಬಾಲವಿಕಾಸ ಅಕಾಡೆಮಿ ಸದಸ್ಯೆ ಹೇಮಾ, ಜಿಲ್ಲಾ ಮಕ್ಕಳ ಕಲ್ಯಾಣಧಿಕಾರಿ ಉಸ್ಮಾನ್‌, ಪುತ್ತೂರು ಮಹಾಧಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ನಯನಾ ರೈ ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿ, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ. ಹೆಗಡೆ ವಂದಿಸಿದರು. ನಿವೃತ್ತ ಉಪನ್ಯಾಸಕ ಪ್ರೊ| ಬಿ.ಜೆ. ಸುವರ್ಣ ನಿರೂಪಿಸಿದರು. 

ಶಿಕ್ಷಣಾಧಿಕಾರಿ ವಿರುದ್ಧ ಸಚಿವ, ಶಾಸಕಿ ಗರಂ…!
ಜಿಲ್ಲಾಮಟ್ಟದ ಮಕ್ಕಳ ಹಬ್ಬದಲ್ಲಿ ಪಾಲ್ಗೊಳ್ಳದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್‌ ಜಿ.ಎಸ್‌. ವಿರುದ್ಧ ಗರಂ ಆದ ಸಚಿವ ರೈ, ಇಂತಹ ಅಗತ್ಯ ಕಾರ್ಯಕ್ರಮದಲ್ಲಿ ಅಧಿಕಾರಿಧಿಗಳು ಬಾರದಿರುವುದು ಅವರ ನಿರಾಸಕ್ತಿ ತೋರಿಧಿಸುತ್ತದೆ ಎಂದು ಅಸಮಾಧಾನ ವ್ಯಕ್ತಧಿಪಡಿಸಿದರು. ಬಳಿಕ ಶಾಸಕಿ ಶಕುಂತಳಾ ಟಿ. ಶೆಟ್ಟಿ ತಾಲೂಕು ಮತ್ತು ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ಗೈರಿನ ಬಗ್ಗೆ ಆಕ್ರೋಶ ವ್ಯಕ್ತಧಿಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಗೈರಿನ ಕುರಿತು ವಿಚಾರಿಸುವಂತೆ ಸಹಾಧಿಯಕ ಕಮಿಷನರ್‌ಗೆ ಸೂಚಿಸಿದ ಶಾಸಕಿ, ಇಲಾಖಾಧಿಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಸಚಿವರು ನಿರ್ಧರಿಸಬೇಕು ಎಂದು ತನ್ನ ಭಾಷಣಧಿದಲ್ಲಿ  ಉಲ್ಲೇಖೀಸಿದರು.

Advertisement

Udayavani is now on Telegram. Click here to join our channel and stay updated with the latest news.

Next