Advertisement

ಸಿನಿಮಾ ನೋಡುವ ‘ಮನಸಾಗಿದೆ’: ನವ ನಾಯಕ ಅಭಯ್‌ ವಿಶ್ವಾಸದ ಮಾತು

02:47 PM Feb 25, 2022 | Team Udayavani |

ಬಹುತೇಕ ಹೊಸಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಮನಸಾಗಿದೆ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಿಂದೆ ಶ್ರೀಕಿ ಅಭಿನಯದ “ಬರ್ತ್‌’ ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದ್ದ ಅಭಯ್‌, “ಮನಸಾಗಿದೆ’ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗು ತ್ತಿದ್ದಾರೆ.

Advertisement

ಈಗಾಗಲೇ ಬಿಡುಗಡೆಯಾಗಿರುವ “ಮನಸಾಗಿದೆ’ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ಒಂದಷ್ಟು ಗಮನ ಸೆಳೆದಿರುವುದ ರಿಂದ, ನೋಡುಗರಿ ಗೂ ಈ ಸಿನಿಮಾದ ಮೇಲೆ “ಮನಸಾಗಿದೆ’ ಎನ್ನುವ ಚಿತ್ರತಂಡ, ಥಿಯೇಟರ್‌ಗೆ ಬಂದು ಪ್ರೇಕ್ಷಕರು ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಬೆನ್ನು ತಟ್ಟುತ್ತಾರೆ ಎಂಬ ವಿಶ್ವಾಸದಲ್ಲಿದೆ.

ಇನ್ನು “ಮನಸಾಗಿದೆ’ ಚಿತ್ರದ ಬಗ್ಗೆ ಮಾತನಾಡುವ ನವ ನಾಯಕ ಅಭಯ್‌, “ಇದೊಂದು ಔಟ್‌ ಆ್ಯಂಡ್‌ ಔಟ್‌ ಲವ್‌ ಸ್ಟೋರಿ ಸಿನಿಮಾ. ಹಾಗಂತ ಎಲ್ಲ ಸಿನಿಮಾಗಳಲ್ಲಿ ಇರುವಂಥ ಮಾಮೂಲಿ ಲವ್‌ ಸ್ಟೋರಿ ಸಿನಿಮಾವಂತೂ ಖಂಡಿತಾ ಇದಲ್ಲ. ಇಲ್ಲಿಯವರೆಗೆ ಯಾವ ಸಿನಿಮಾದಲ್ಲೂ ಹೇಳಿರದ ರೀತಿಯಲ್ಲಿ, ಒಂದು ಹೊಸ ಲವ್‌ ಸ್ಟೋರಿಯನ್ನು, ಹೊಸ ರೀತಿಯಲ್ಲಿ ಈ ಸಿನಿಮಾದಲ್ಲಿ ಹೇಳಿದ್ದೇವೆ. ಇದು ಯೂಥ್‌ ಮತ್ತು ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗುವಂತಿದೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂಥ ವಿಷಯ ಸಿನಿಮಾದಲ್ಲಿದೆ’ ಎಂದು ಕಥಾಹಂದರದ ವಿಶೇಷತೆ ಎಳೆ ಬಿಚ್ಚಿಡುತ್ತಾರೆ.

ಇದನ್ನೂ ಓದಿ:‘ಓಲ್ಡ್‌ ಮಾಂಕ್‌’ ಕಿಕ್‌ ಸ್ಟಾರ್ಟ್‌!

“ತೇಜಸ್‌ ಕ್ರಿಯೇಶನ್ಸ್‌’ ಬ್ಯಾನರ್‌ನಲ್ಲಿ ಎಸ್‌. ಚಂದ್ರಶೇಖರ್‌ ನಿರ್ಮಿಸುತ್ತಿರುವ “ಮನಸಾಗಿದೆ’ ಚಿತ್ರದಲ್ಲಿ ಅಭಯ್‌ಗೆ ಮೇಘಶ್ರೀ, ಅಥಿರಾ ನಾಯಕಿಯಾಗಿ ತೆರೆಮೇಲೆ ಜೋಡಿಯಾಗಿದ್ದಾರೆ. ಉಳಿದಂತೆ ಸುರೇಶ್‌ ರೈ, ಭವ್ಯಶ್ರೀ ರೈ, ಸೂರಜ್, ತೇಜಸ್‌, ಅನೀಶ್‌, ಚಿದು ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

“ಮನಸಾಗಿದೆ’ ಚಿತ್ರಕ್ಕೆ ಶ್ರೀನಿವಾಸ್‌ ಶಿಡ್ಲಘಟ್ಟ ನಿರ್ದೇಶನವಿದೆ. ಚಿತ್ರದ ಐದು ಹಾಡುಗಳಿಗೆ ಮಾನಸ ಹೊಳ್ಳ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಕೆ. ಕಲ್ಯಾಣ್‌, ಡಾ. ವಿ ನಾಗೇಂದ್ರ ಪ್ರಸಾದ್‌, ಅರಸು ಅಂತಾರೆ, ಕವಿರಾಜ್‌, ಮಜಾ ಟಾಕೀಸ್‌ ರೆಮೋ ಸಾಹಿತ್ಯವಿದೆ

Advertisement

Udayavani is now on Telegram. Click here to join our channel and stay updated with the latest news.

Next