Advertisement

ಮಾಜಿ ಶಾಸಕ ಮಾನಪ್ಪ ವಜ್ಜಲ್‌ ಬಳಿ ಜೀವಂತ ಗುಂಡು ಪತ್ತೆ, ಅಧಿಕಾರಿಗಳಿಂದ ವಿಚಾರಣೆ

11:46 PM Dec 19, 2020 | sudhir |

ಬೆಂಗಳೂರು : ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ಮಾಜಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ ಮಾನಪ್ಪ ವಜ್ಜಲ್‌ ಅವರು 16 ಜೀವಂತ ಗುಂಡುಗಳನ್ನು ಕೊಂಡೊಯ್ಯುತ್ತಿದ್ದಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಫ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ ಘಟನೆ ನಡೆದಿದೆ.

Advertisement

ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್‌ ಇಂಡಿಯಾದಲ್ಲಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿದ್ದರು. ತಪಾಸಣ ವಿಭಾಗದಲ್ಲಿ ಬ್ಯಾಗ್‌ ಪರಿಶೀಲನೆ ವೇಳೆ 32 ಎಂಎಂ ಪಿಸ್ತೂಲ್‌ಗೆ ಬಳಸುವ ಗುಂಡುಗಳು ಪತ್ತೆಯಾಗಿವೆ. ಕೂಡಲೇ ಭದ್ರತಾ ಸಿಬಂದಿ ಸಿಐಎಸ್‌ಎಫ್ ಅಧಿಕಾರಿಗಳಿಗೆ ಮಾಜಿ ಶಾಸಕರನ್ನು ಒಪ್ಪಿಸಿದ್ದು, ಸ್ವಲ್ಪ ಹೊತ್ತು ವಿಚಾರಣೆ ನಡೆಸಲಾಗಿದೆ.

ಅಜಾಗರೂಕತೆಯಿಂದ ಬ್ಯಾಗ್‌ನಲ್ಲಿ ಗುಂಡುಗಳು ಬಂದಿವೆ. ಯಾವುದೇ ಉದ್ದೇಶವಿಲ್ಲ ಎಂದು ವಜ್ಜಲ್‌ ಸ್ಪಷ್ಟ ಪಡಿಸಿ ಲಿಖೀತ ಹೇಳಿಕೆ ನೀಡಿದ್ದಾರೆ. ಬಳಿಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರಿಗೆ ಒಪ್ಪಿಸಿದ್ದಾರೆ.
ಠಾಣೆಯಲ್ಲಿ ವಿಚಾರಣೆ ನಡೆಸಿದಾಗ, “ತನ್ನಲ್ಲಿ ಪಿಸ್ತೂಲ್‌ ಮತ್ತು ಗುಂಡು ಬಳಕೆ ಪರವಾನಿಗೆ ಇದೆ. ಕಾಲಾವಕಾಶ ನೀಡಿದರೆ ತಂದು ಕೊಡುವುದಾಗಿ ಮನವಿ ಮಾಡಿದ್ದಾರೆ. ಅಲ್ಲದೆ, ಬ್ಯಾಗ್‌ನಲ್ಲಿ ಜೀವಂತ ಗುಂಡುಗಳು ಇರುವ ಬಗ್ಗೆ ಗಮನಕ್ಕೆ ಬಂದಿರಲಿಲ್ಲ. ಯಾವುದೇ ಉದ್ದೇಶದಿಂದ ಕೊಂಡೊಯ್ಯುತ್ತಿಲ್ಲ’ ಎಂದು ತಿಳಿಸಿದ ಕಾರಣ ಲಿಖೀತ ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಾಜಿ ಶಾಸಕರು ಪರವಾನಿಗೆ ಪತ್ರ ಸಲ್ಲಿಸಿದ ಬಳಿಕ ಗುಂಡುಗಳನ್ನು ಹಿಂದಿರುಗಿಸಲಾಗುತ್ತದೆ. ಅದುವರೆಗೂ ಅದು ತಮ್ಮ ಬಳಿಯೇ ಇರಲಿವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next