Advertisement

ಅಗ್ನಿಕುಂಡ,ಶಿರಚ್ಛೇದ.. ದೇವರಿಗಾಗಿ ತಮ್ಮ ಶಿರವನ್ನೇ ಅರ್ಪಿಸಿ ದೈವ ಭಕ್ತಿ ಮೆರೆದ ದಂಪತಿ.!

08:59 AM Apr 17, 2023 | Team Udayavani |

ರಾಜ್‌ ಕೋಟ್: ಅಪಾರ ದೈವ ಭಕ್ತಿಯ ಹೊಂದಿದ್ದ ದಂಪತಿಯೊಂದು ತಮ್ಮ ಶಿರವನ್ನೇ ದೇವರಿಗೆ ಅರ್ಪಿಸಿರುವ ಘಟನೆ ಗುಜರಾತ್‌ ನ ರಾಜ್ ಕೋಟ್‌ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

Advertisement

ಹೇಮುಭಾಯಿ ಮಕ್ವಾನಾ (38) ಮತ್ತು ಅವರ ಪತ್ನಿ ಹಂಸಾಬೆನ್ (35) ಮೃತ ದಂಪತಿ.

ಹೇಮುಭಾಯಿ ಮಕ್ವಾನಾ ಮತ್ತು ಅವರ ಪತ್ನಿ ಹಂಸಾಬೆನ್ ಅಪಾರ ದೈವ ಭಕ್ತಿಯನ್ನು ಹೊಂದಿದ್ದರು. ದೇವರಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದವಿದ್ದ ದಂಪತಿ, ತಮ್ಮ ಜೀವವನ್ನೇ ದೇವರಿಗಾಗಿ ಅರ್ಪಿಸಿದ್ದಾರೆ.

ತಮ್ಮ ಗುಡಿಸಲಿನಲ್ಲಿ ದಂಪತಿ ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುತ್ತಿದ್ದರು. ದೇವರಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಒಂದು ಯೋಜನೆಯನ್ನು ರೂಪಿಸಿದ್ದಾರೆ. ತಮ್ಮ ಮನೆಯಲ್ಲೇ ಒಂದು ಶಿರಚ್ಛೇದ ಯಂತ್ರವನ್ನು ತಯಾರಿಸಿದ್ದಾರೆ. ಆ ಬಳಿಕ ಒಂದು ಅಗ್ನಿಕುಂಡವನ್ನು ಮಾಡಿದ್ದಾರೆ.  ಶಿರಚ್ಛೇದದ ಯಂತ್ರಕ್ಕೆ ಒಂದು ಹಗ್ಗವನ್ನು ಕಟ್ಟಿದ್ದಾರೆ. ಹಗ್ಗ ಎಳೆದರೆ ಕಟ್ಟಿದ್ದ ಬ್ಲೇಡ್‌ ತಮ್ಮ ಶಿರಕ್ಕೆ ಬೀಳುತ್ತದೆ. ತಮ್ಮ ಶಿರ ಅಗ್ನಿಕುಂಡಕ್ಕೆ ಬೀಳಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಂಪತಿಗಳು ಹಗ್ಗವನ್ನು ಎಳೆದಿದ್ದಾರೆ. ಆಗ ಚೂಪಾದ ಬೃಹತ್ ಬ್ಲೇಡ್‌ ವೊಂದು ಅವರ ಕುತ್ತಿಗೆಗೆ ಬಂದು ತಾಗಿದ ಪರಿಣಾಮ ಅವರ ಶಿರ ದೇಹದಿಂದ ಬೇರ್ಪಟ್ಟು ನೇರವಾಗಿ ಅಗ್ನಿಕುಂಡಕ್ಕೆ ಹೋಗಿ ಉರುಳಿ ಬಿದ್ದಿದೆ. ಆ ಮೂಲಕ ದಂಪತಿಗಳು ತಮ್ಮ ಪ್ರಾಣವನ್ನೇ ದೇವರ ಆಚರಣೆಯ ನೆಪದಲ್ಲಿ ಅರ್ಪಿಸಿದ್ದಾರೆ.

Advertisement

ಘಟನೆ ಶನಿವಾರ ರಾತ್ರಿ ಅಥವಾ ಭಾನುವಾರ ಮಧಾಹ್ನದ ವೇಳೆ ನಡೆದಿರಬಹುದು. ಸ್ಥಳದಿಂದ ಮರಣ ಪತ್ರ ಸಿಕ್ಕಿದ್ದು, ಅದರಲ್ಲಿ ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕುಟುಂಬದವರಿಗೆ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದಂಪತಿಯ ಮಕ್ಕಳು ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next